
ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿಗೆ 2022-23ನೇ ಸಾಲಿನಲ್ಲಿ ಶೇ.100 ಫಲಿತಾಂಶ ಪಡೆದಿತ್ತು.ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಮಂಗಳೂರಿನ ವತಿಯಿಂದ ಅಭಿನಂದನಾ ಫಲಕವನ್ನು ಕಾಲೇಜಿಗೆ ನೀಡಲಾಗಿತ್ತು. ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ ಅವರು ಅಭಿನಂದನಾ ಫಲಕವನ್ನು ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ರವರಿಗೆ ಹಸ್ತಾಂತರಿಸಿ ಫಲಿತಾಂಶಕ್ಕೆ ಕಾರಣಿಕರ್ತರಾದ ಪ್ರಾಚಾರ್ಯರಿಗೆ ಹಾಗೂ ಎಲ್ಲಾ ಉಪನ್ಯಾಸಕರಿಗೆ ಶುಭಹಾರೈಸಿ,ಮುಂಬರುವ ವರ್ಷದಲ್ಲೂ ಶೇ.100ಫಲಿತಾಂಶ ತಂದು ಕಾಲೇಜಿಗೆ ಕೀರ್ತಿ ತರಬೇಕೆಂದು ಆಶಿಸಿದರು.
