
ಮಂಗಳೂರಿಂದ ಡಿಸೇಲ್ ಹೇರಿಕೊಂಡು ಕರಿಕೆ ಬಾಗಕ್ಕೆ ಬರತ್ತಿದ್ದ ಟ್ಯಾಂಕರ್ ಪಾಣತ್ತೂರು ಸಮೀಪ ಪರಿಯಾರ ಎಂಬ ಪ್ರದೇಶದಲ್ಲಿ ಪಲ್ಟಿಯಾಗಿ ಇಬ್ಬರು ಗಂಭೀರ ಸ್ವರೂಪದ ಗಾಯಗೊಂಡಿದ್ದು, ಗಾಯಾಳುಗಳ ಹೇಳಿಕೆಯಂತೆ ಮತ್ತೋರ್ವನಿಗೆ ಹುಡುಕಾಟ ನಡೆಸಲಾಗುತ್ತಿದೆ, ಗಂಭೀರ ಗಾಯಗೊಂಡಿರುವ ಟ್ಯಾಂಕರ್ ಚಾಲಕ ಮತ್ತು ಮತ್ತೋರ್ವನನ್ನು ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಟ್ಯಾಂಕರ್ ಹಲವು ಪಲ್ಟಿ ಹೊಡೆದಿದ್ದು ಅಪಘಾತದ ಬೀಕರತೆಗೆ ಟ್ಯಾಂಕರ್ ನಜ್ಜುಗುಜ್ಜಾಗಿದ್ದು , ತುಂಬಿರುವ ಡಿಸೆಲ್ ಅಲ್ಪ ಪ್ರಮಾಣದಲ್ಲಿ ಸೋರಿಕೆಯಾಗುತ್ತಿರುವುದಾಗಿ ತಿಳಿದು ಬಂದಿದೆ.



ಕಳೆದ ವರ್ಷ ಇದೇ ಪರಿಯಾರ ಪ್ರದೇಶದಲ್ಲಿ ಸುಳ್ಯದಿಂದ ತೆರಳುತ್ತಿದ್ದ ಕೇರಳ ಬಸ್ ಪಲ್ಟಿಯಾಗಿ 7 ಮಂದಿ ಸಾವನ್ನಪ್ಪಿ ಅನೇಕ ಮಂದಿ ಗಾಯಾಳುಗಳಾಗಿದ್ದರು ಈ ಬೀಕರ ಅಪಘಾತ ನೆನಪು ಮಾಸುವ ಮುನ್ನ ಅದೇ ಸ್ಥಳದಲ್ಲಿ ಟ್ಯಾಂಕರ್ ಪಲ್ಟಿಯಾಗಿ ಆಪಘಾತ ವಲಯವಾಗಿದೆ, ಸ್ಥಳೀಯರು ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ


.