ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಆರೋಪ ಹೊತ್ತಿರುವ ವ್ಯಕ್ತಿಗಳಲ್ಲಿ ಒಬ್ಬರಾದ ಉದಯ್ ಜೈನ್ ವಿನಾ ಕಾರಣ ತನ್ನಮೇಲೆ ಸೌಜನ್ಯ ಪ್ರಕರಣದಲ್ಲಿ ಆರೋಪ ಮಾಡುತಿದ್ದು 13 ವರ್ಷಗಳಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದು ಈಗಲೂ ಅದೇ ಆರೋಪದಿಂದ ಮನ ನೊಂದಿದ್ದೇನೆ.

ತಾವು ಎಲ್ಲಾ ತನಿಖೆಯನ್ನು ಎದುರಿಸಿದ್ದೇವೆ ಬ್ರೈನ್ ಮ್ಯಾಪ್ ಕೂಡ ನಡೆಸಲಾಗಿದೆ ಆದರೂ ನಮ್ಮ ಮೇಲೆ ಆರೋಪ ಹೋಗಿಲ್ಲ ಅದಕ್ಕೆ ತಮಗೆ ದಯಾ ಮರಣ ಕೊಡಲು ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಆಗುತ್ತಿದೆ.
ಧರ್ಮಸ್ಥಳ ಪರ ಇರುವ ವ್ಯಕ್ತಿಗಳು ಧರ್ಮಸ್ಥಳಕ್ಕೆ ಪರವೂರಿಂದ ಜನ ಮುಕ್ತಿಗಾಗಿ ಬಂದು ಆತ್ಮಹತ್ಯೆ ಮಾಡುತ್ತಿದ್ದಾರೆ ಎಂದು ಹೇಳಿದನ್ನು ಇಲ್ಲಿ ಉಲ್ಲೇಖಿಸಿ ಪರ ಊರ ಜನರೇ ಮುಕ್ತಿಗಾಗಿ ಇಲ್ಲಿ ಆತ್ಮಹತ್ಯೆ ಮಾಡುತ್ತಿರುವಾಗ ದಯಾ ಮರಣ ಯಾಕೆ ನೇತ್ರಾವತಿಗೆ ಹಾರು ಎಂದು ಟ್ರೊಲ್ ಮಾಡುತ್ತಿದ್ದಾರೆ. ಒಟ್ಟಾರೆ ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿದೆ.

