ಎಲ್ಲರ ಚಿತ್ತ ಧರ್ಮಸ್ಥಳದತ್ತ – ಕೆಲವೇ ಕ್ಷಣದಲ್ಲಿ ಉತ್ಖನನ ಕಾರ್ಯ ಆರಂಭ

ಎಲ್ಲರ ಚಿತ್ತ ಧರ್ಮಸ್ಥಳದತ್ತ – ಕೆಲವೇ ಕ್ಷಣದಲ್ಲಿ ಉತ್ಖನನ ಕಾರ್ಯ ಆರಂಭ

ಕುತೂಹಲ ಮೂಡಿಸಿದ್ದ ಧರ್ಮಸ್ಥಳದ ಅಸ್ತಿಪಂಜರ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ನಿನ್ನೆ ಸ್ಥಳ ಮಹಜರು ನಡೆಸಿ ಮಾರ್ಕ್ ಮಾಡಿದ್ದ ಸ್ಥಳವನ್ನು ಇಂದು ಉತ್ಖನನ ಮಾಡುವ ಸಾಧ್ಯತೆ ಇದೆ. ಈಗಾಗಲೆ ಸ್ಥಳಕ್ಕೆ ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗೀಸ್ ಅವರು ಬರುವಂತೆ ಎಸ್ ಐ ಟಿ ಸೂಚಿಸಿದೆ ಎಂದು ತಿಳಿದು ಬಂದಿದೆ.

ಅಗೆಯಲು 12 ಜನರ ನಿಯೋಜನೆಗೆ ಗ್ರಾಮ ಪಂಚಾಯತ್ ಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಹೊರಬರುತ್ತಿದೆ. ಉತ್ಖನನ ಕಾರ್ಯಕ್ಕೆ ಮಳೆ ಅಡ್ಡಿ ಆಗುವ ಕಾರಣ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ.

ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ