ಸೇವಾಭಾರತಿಯಿಂದ ಫಿಮ್ ಇಂಡಿಯಾ ಕಂಪೆನಿಯ ಭೇಟಿ.

ಸೇವಾಭಾರತಿಯಿಂದ ಫಿಮ್ ಇಂಡಿಯಾ ಕಂಪೆನಿಯ ಭೇಟಿ.

ಬೆಂಗಳೂರು, ಫಿಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಶ್ರೀ ಆರ್ಯ ಮತ್ತು ಕು. ಮೃಣಾಲಿನಿಯವರನ್ನು ಜುಲೈ 04 ರಂದು ಭೇಟಿ ಮಾಡಲಾಯಿತು. ಸೇವಾಧಾಮ ಸೇವಾಭಾರತಿಯ ಸೇವಾಕಾರ್ಯಗಳ ಬಗ್ಗೆ ಅವರಿಗೆ ವಿವರಿಸಿ ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕಾಗಿ ಮತ್ತು ಬೈಂದೂರಿನಲ್ಲಿ ನಿರ್ಮಾಣವಾಗುವ ಒತ್ತಡಗಾಯ ನಿರ್ವಹಣೆ ಮತ್ತು ಪುನಶ್ಚೇತನ ಕೇಂದ್ರಕ್ಕೆ ತಮ್ಮ ಕಂಪೆನಿಯ CSR ನ ಮೂಲಕ ಸಹಕರಿಸುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸೇವಾಧಾಮ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಮತ್ತು ಹಿರಿಯ ಪ್ರಬಂಧಕರಾದ ಶ್ರೀ ಚರಣ್ ಕುಮಾರ್ ಎಂ ಉಪಸ್ಥಿತರಿದ್ದರು.

ರಾಜ್ಯ