ನವದೆಹಲಿ: ಜುಲೈ 9ರಂದು (ನಾಳೆ) ದೇಶವ್ಯಾಪಿ ಭಾರತ ಬಂದ್ ಗೆ ಕರೆ ನೀಡಲಾಗಿದೆ. ಬ್ಯಾಂಕಿಂಗ್, ಅಂಚೆ, ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ಸಾರಿಗೆ ಸೇರಿದಂತೆ ವಿವಿಧ ಸರ್ಕಾರಿ ವಿಭಾಗಗಳ 25 ಕೋಟಿಗೂ ಹೆಚ್ಚು ಉದ್ಯೋಗಿಗಳು ಈ ಮುಷ್ಕರದಲ್ಲಿ ಭಾಗಿಯಾಗುತ್ತಿದ್ದಾರೆ. ಕಾರ್ಮಿಕ ಸಂಘಟನೆಗಳ ಒಕ್ಕೂಟ ಈ ಬಂದ್ ಗೆ ಕರೆ ನೀಡಿದ್ದು, ಜನಸೇವೆಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.

ಬಂದ್ ಯಾಕೆ?
ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ. ಹೊಸ ಕಾರ್ಮಿಕ ಸಂಹಿತೆ (Labour Codes) ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಡಿಮೆ ಮಾಡುವ, ಪ್ರತಿಭಟನೆಗಳ ಮೇಲೆ ನಿಯಂತ್ರಣ ಹೇರುವ, ನಿರುದ್ಯೋಗ ಮತ್ತು ಬೆಲೆ ಏರಿಕೆ ನಿಯಂತ್ರಣದತ್ತ ಗಂಭೀರತೆ ತೋರದ ಹಿನ್ನಲೆಯಲ್ಲಿ ಈ ಬಂದ್ ಆಯೋಜಿಸಲಾಗಿದೆ.
ಬಂದ್ನಲ್ಲಿ ಇರುವ ಪ್ರಮುಖ ಬೇಡಿಕೆಗಳು:
- ಹೊಸ ಲೇಬರ್ ಕೋಡ್ಗಳನ್ನು ಹಿಂಪಡೆಯಬೇಕು
- ಉದ್ಯೋಗಾವಕಾಶ ಹೆಚ್ಚಿಸಬೇಕು, ನಿವೃತ್ತರ ನೇಮಕಾತಿ ನಿಲ್ಲಿಸಬೇಕು
- ಆರೋಗ್ಯ-ಶಿಕ್ಷಣ-ನಾಗರಿಕ ಸೌಲ್ಯಗಳಿಗೆ ಕಡಿತ ಬೇಡ.
- ಕಾರ್ಮಿಕ ಸಮ್ಮೇಳನವನ್ನು ಆಯೋಜಿಸಬೇಕು.
- ರೈತ ಹಾಗೂ ವಲಸೆ ಕಾರ್ಮಿಕರ ಹಕ್ಕುಗಳಿಗೆ ರಕ್ಷಣೆ ನೀಡಬೇಕು.
ಬಂದ್ನಿಂದ ಏನು ಮುಚ್ಚಿರುತ್ತೆ?
- ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು, ಪಿಎಸ್ಯುಗಳ ಕಾರ್ಯಗಳು ಸ್ಥಗಿತವಾಗುವ ಸಾಧ್ಯತೆ.
- ರಾಜ್ಯ ಸಾರಿಗೆ ಸೇವೆಗಳು ಅಸ್ತವ್ಯಸ್ತ ಆಗುವ ಸಾಧ್ಯತೆ.
•ಗ್ರಾಮೀಣ ಪ್ರದೇಶಗಳಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗಳು.
ಏನು ತೆರೆದಿರುತ್ತೆ?
•ಖಾಸಗಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ.
- ರೈಲು ಸಂಚಾರ ಸ್ಥಗಿತವಾಗದಿದ್ದರೂ ವಿಳಂಬ ಸಂಭವ
ಜನರಿಗೆ ಸಲಹೆ:
ಭಾರತ್ ಬಂದ್ ಹಿನ್ನೆಲೆಯಲ್ಲಿ ಜನರು ತುರ್ತು ಕೆಲಸಗಳಿಗೆ ಹೊರಟು ಬರುವ ಮೊದಲು ಪರಿಸ್ಥಿತಿ ಪರಿಶೀಲಿಸಿಕೊಳ್ಳುವುದು ಉತ್ತಮ. ಸಾರ್ವಜನಿಕ ಸಾರಿಗೆ ವ್ಯವಹಾರ, ಬ್ಯಾಂಕಿಂಗ್ ಕಾರ್ಯಗಳಲ್ಲಿ ವ್ಯತ್ಯಯ ಎದುರಾಗಬಹುದು.

