–ಸಂಪಾದಕೀಯ:
ಸುಳ್ಯ ನಗರ ವ್ಯಾಪ್ತಿಯ ಭಸ್ಮಡ್ಕ ಪ್ರದೇಶ ಕಳೆದ 30 ಗಂಟೆಗಳಿನಿಂದ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ.ಎಲ್ಲೆಲ್ಲೂ ವಿದ್ಯುತ್ ಸೇವೆ ಇಲ್ಲದೆ ನಿತ್ಯ ಜೀವನ ಅಸ್ತವ್ಯಸ್ತವಾಗಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿಯೂ ಸಹ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


ಕರೆ ಸ್ವೀಕರಿಸದ ಇಲಾಖೆ:
ವಿದ್ಯುತ್ ಸೇವೆಯಲ್ಲಿ ವ್ಯತ್ಯಯವಾದ ಕೂಡಲೇ ಜನರು ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಿದಾಗ, ಅದು ನೇರವಾಗಿ ಬೆಂಗಳೂರಿಗೆ ಸಂಪರ್ಕವಾಗುತ್ತಿದೆ. ಹಲವಾರು ಬಾರಿ ಕರೆ ಮಾಡಿದರೂ ಸಹ ಮೆಸ್ಕಾಂ ಮಂಗಳೂರಿಗೆ ಸಂಪರ್ಕ ವಾಗದೆ ಬೆಂಗಳೂರಿಗೆ ಸಂಪರ್ಕವಾಗುತ್ತಿದೆ.
ಕಾಲ್ ಕಟ್ ಮಾಡುವ ಸುಳ್ಯದ ಮೆಸ್ಕಾಂ ಸಹಾಯಕ ಇಂಜಿನಿಯರ್:
ಸ್ಥಳೀಯರು ಹೇಳಿಕೆಯಂತೆ– ಸುಳ್ಯದ ಮೆಸ್ಕಾಂ ಸಹಾಯಕ ಇಂಜಿನಿಯರ್ಗೆ ಕರೆ ಮಾಡಿದಾಗ, ನಾವು ಸಮಸ್ಯೆ ವಿವರಿಸುವ ಮೊದಲೇ ಕಾಲ್ ಕಟ್ ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ಮೇಲೆ ಅಸಡ್ಡೆ ಹಾಗೂ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿದೆ.
ಒಂದೇ ಲೈನ್ಮನ್ಗಳು, ಸಹಾಯಕ ಇಂಜಿನಿಯರ್ ದೀರ್ಘಕಾಲದಿಂದ ಸುಳ್ಯದಲ್ಲೇ!
ಸುಳ್ಯದ ಮೆಸ್ಕಾಂ ವಿಭಾಗದಲ್ಲಿ ಒಂದೇ ಲೈನ್ಮನ್ಗಳು ವರ್ಷಾಂತರದಿಂದ ಕೆಲಸ ಮಾಡುತ್ತಿರುವುದು, ಮತ್ತು ಸಹಾಯಕ ಇಂಜಿನಿಯರ್ ಕೂಡಾ ದೀರ್ಘಕಾಲದಿಂದ ಇಲ್ಲೇ ಜಾಂಡ ಹೊಡೆದು ಕೂತಿರುವುದು, ಇಡೀ ವ್ಯವಸ್ಥೆಯಲ್ಲಿನ ದುರಂಕಾರ ಹಾಗೂ ಅಸಡ್ಡೆಯ ಮೂಲವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸುಳ್ಯದ ಶಾಸಕರಿಗೆ ಈ ವಿಷಯದ ಮಾಹಿತಿ ಇದೆಯೇ?
ಇದು ಒಂದು ದಿನದ ಸಮಸ್ಯೆಯಲ್ಲ ಪ್ರತಿ ನಿತ್ಯ ಕರೆಂಟ್ ಹೋದಾಗ ಇದೆ ಸ್ಥಿತಿ ಸ್ಥಳೀಯ ಶಾಸಕರು ಈ ವಿದ್ಯುತ್ ಸಮಸ್ಯೆ ಬಗ್ಗೆ ಅರಿವಿನಲ್ಲಿ ಇದ್ದಾರೆಯೇ? ಅಥವಾ ಜನರ ಈ ದೈನಂದಿನ ತೊಂದರೆಗಳು ಅವರಿಗೆ ತಲುಪಲೇ ಇಲ್ಲವೋ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.