ಹುಬ್ಬಳ್ಳಿ, ಮೇ 13: ಗುರುಸಿದ್ದೇಶ್ವರ ನಗರದಲ್ಲಿ ಸಂಭವಿಸಿದ ಅಮಾನವೀಯ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. 6ನೇ ತರಗತಿಯ ವಿದ್ಯಾರ್ಥಿಯೊಬ್ಬರು 8ನೇ ತರಗತಿಯ ಚೇತನ ರಕ್ಕಸಗಿ ಎಂಬ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಆಟವಾಡುವ ಸಂದರ್ಭ ಸಣ್ಣ ಜಗಳದಿಂದ ಹುಟ್ಟಿದ ದ್ವೇಷವು ಕೊನೆಯಾಗಿ ಪ್ರಾಣಹರಣಕ್ಕೆ ಕಾರಣವಾಗಿದೆ. ಈ ಘಟನೆಯು ಬಾಲಕರಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿಯ ತೀವ್ರತೆಯನ್ನು ತೋರಿಸಿದೆ.


ಹತ್ಯೆಗೊಳಗಾದ ಚೇತನ, ಸ್ಥಳೀಯ ರೊಟ್ಟಿ ವ್ಯಾಪಾರಿ ಸೋಮಶೇಖರ ರಕ್ಕಸಗಿಯ ಏಕೈಕ ಪುತ್ರನಾಗಿದ್ದು, ಪರೀಕ್ಷೆ ಮುಗಿಸಿ 9ನೇ ತರಗತಿಗೆ ಹೋಗಲು ಸಿದ್ಧನಾಗಿದ್ಧ.
ಈ ದಾರುಣ ಕೃತ್ಯದ ಹಿಂದೆ ಸಾಮಾಜಿಕ ಜಾಲತಾಣಗಳು, ಟೆಲಿವಿಷನ್, ಯೂಟ್ಯೂಬ್ ವಿಡಿಯೋಗಳು ಮತ್ತು ಹಿಂಸಾತ್ಮಕ ಗೇಮ್ಗಳ ಪರಿಣಾಮವಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇವುಗಳಲ್ಲಿ ಹಿಂಸೆಯನ್ನು ಸಾಹಸವೆಂದು ಮೆಚ್ಚಿಸುವ ಪ್ರಭಾವದಿಂದ ಮಕ್ಕಳು ಕ್ರೌರ್ಯದತ್ತ ಆಕರ್ಷಿತರಾಗುತ್ತಿರುವ ಸಾಧ್ಯತೆ ಇದೆ. ಮುಗ್ಧತೆ, ಕರುಣೆ ಮತ್ತು ಸಹಾನುಭೂತಿಯಂಥ ಮೌಲ್ಯಗಳು ಮಕ್ಕಳ ಮನಸ್ಸಿನಿಂದ ಮಾಯವಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.
ಇದಕ್ಕೆ ಪರಿಹಾರವಾಗಿ ಪೋಷಕರು, ಶಿಕ್ಷಕರು ಮತ್ತು ಸಮಾಜದ ಪ್ರತಿಯೊಬ್ಬ ನಾಗರಿಕರೂ ಮಕ್ಕಳ ಮಾನಸಿಕ ಬೆಳವಣಿಗೆಯನ್ನು ನಿಜವಾದ ಪ್ರಾಮುಖ್ಯತೆಯಿಂದ ಪರಿಗಣಿಸಬೇಕು. ಪಾಠ್ಯಕ್ರಮದಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳು ಹಾಗೂ ಮನೋವಿಜ್ಞಾನವನ್ನು ಕಡ್ಡಾಯವಾಗಿ ಸೇರಿಸಬೇಕಾಗಿದೆ. ಮಕ್ಕಳೊಂದಿಗೆ ನಿರಂತರ ಸಂವಾದ, ಭಾವನಾತ್ಮಕ ಬೆಂಬಲ ಹಾಗೂ ನಮನೀಯ ಮಾರ್ಗದರ್ಶನದ ಅಗತ್ಯವಿದೆ.