‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಅಪಶಕುನಗಳು ಹತ್ತಿರವಾಗುತ್ತಲೇ ಇವೆ. ಯಶಸ್ವಿಯಾದ ಕಾಂತಾರ ಚಿತ್ರದ ನಂತರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಸೆಟ್ನಲ್ಲಿ ಈಗ ಮತ್ತೊಂದು ದುಃಖದ ಸುದ್ದಿ ಕೇಳಿಬಂದಿದೆ. ಪ್ರಮುಖ ಪಾತ್ರಧಾರಿಯಾದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ.


ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ?
ತುಳುನಾಡಿನ ಆರಾಧ್ಯ ದೈವವನ್ನು ಕಾಂತರ ಚಿತ್ರ ತಂಡ ರಸ್ತೆಯಲ್ಲಿ ಕುಣಿಯುವಂತೆ ಮಾಡಿದೆ ಎಂದು ದೈವರಾದಕರು ಮತ್ತು ತುಳುನಾಡಿನ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚಿತ್ರತಂಡ ಈಗ ದೈವದ ಕೋಪಕ್ಕೂ ತುತ್ತಾಯಿತೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಇದೇ ಸೆಟ್ನಲ್ಲಿ ಇನ್ನೊಬ್ಬ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಕೊಲ್ಲೂರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ರಾಕೇಶ್ ಪೂಜಾರಿ ಮೇ 11ರ ಬೆಳಿಗ್ಗೆ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ನಂತರ ಮಿಯ್ಯಾರಿನಲ್ಲಿ ನಡೆದ ತಮ್ಮ ಗೆಳೆಯನ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಏಕಾಏಕಿ ಕುಸಿದುಬಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾದರೂ, ಅವರು ಚಿಕಿತ್ಸೆಗಾಗಿ ಸ್ಪಂದಿಸಲಿಲ್ಲ. ಹೃದಯಾಘಾತವೇ ಅವರ ಸಾವಿಗೆ ಕಾರಣವೆಂದು ವೈದ್ಯರು ತಿಳಿಸಿದ್ದಾರೆ
ರಾಕೇಶ್ ಪೂಜಾರಿ ‘ಕಾಮಿಡಿ ಕಿಲಾಡಿಗಳು’ ಮೂಲಕ ಜನಮನ ಗೆದ್ದಿದ್ದರು. ಅವರ ನಗುನಗೆ ಮತ್ತು ಮಿಮಿಕ್ರಿ ಪ್ರತಿಭೆಯು ಹಲವು ಸಿನೆಮಾ ಅವಕಾಶಗಳನ್ನು ತಂದಿತ್ತು. ರಿಷಬ್ ಶೆಟ್ಟಿಯ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದರು.