ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆ ಕರೆನೀಡಿದ ದ.ಕ ಬಂದ್ ನ ಬಿಸಿ ಸುಳ್ಯಕ್ಕೆ ತಟ್ಟಿದ ಮುಂಜಾನೆಯಿಂದ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್ ಗೆ ವ್ಯಾಪಕ ಬೆಂಬಲ ಸೂಚಿಸಿದೆ.







ತರಕಾರಿ ಹಣ್ಣು ಹಂಪಲು ಅಂಗಡಿಗಳು ಮಾತ್ರ ಕೆಲವೆಡೆ ತೆರೆದಿದ್ದು ಬಾಕಿ ಕೆಲವು ಅಂಗಡಿಗಳು ಅರ್ಧ ಬಾಗಿಲು ತೆರೆದಿರುವ ದೃಶ್ಯ ಕಂಡು ಬಂದಿದೆ. ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಮುಖಂಡರು ವೇಂಕಟ್ ವಳಲಂಬೆ ಮತ್ತು ನಿಕೇಶ್ ನೇತೃತ್ವದಲ್ಲಿ ತೆರಳಿ ವರ್ತಕರಲ್ಲಿ ಬಂದ್ ಗೆ ಬೆಂಬಲ ಸೂಚಿಸುವಂತೆ ವಿನಟಿಸುವ ದೃಶ್ಯ ಕಂಡು ಬಂದಿದೆ. ಉಳಿದಂತೆ ಜನ ಜೀವನ ಎಂದಿನಂತೆ ಇದ್ದು ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.