ಮಂಗಳೂರು: ಜಿಲ್ಲಾಡಳಿತದಿಂದ ನಿಷೇಧಾಜ್ಞೆ – ಮೇ 2 ರಿಂದ 5ರವರೆಗೆ ಕಟ್ಟೆಚ್ಚರ ಕ್ರಮ

ಮಂಗಳೂರು: ಜಿಲ್ಲಾಡಳಿತದಿಂದ ನಿಷೇಧಾಜ್ಞೆ – ಮೇ 2 ರಿಂದ 5ರವರೆಗೆ ಕಟ್ಟೆಚ್ಚರ ಕ್ರಮ

ಮೇ 2: ಮೇ 1ರಂದು ಮಂಗಳೂರು ನಗರದಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಂತಿ ಭದ್ರತೆ ಕಾಪಾಡುವ ಉದ್ದೇಶದಿಂದ, ದ.ಕ. ಜಿಲ್ಲಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಅವರು ಮೇ 2ರಿಂದ ಮೇ 5, 2025ರ ಮಧ್ಯಾಹ್ನ 12 ಗಂಟೆಯವರೆಗೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು,ಕಡಬ ಮತ್ತು ಸುಳ್ಯ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೆ ತಂದಿದ್ದಾರೆ.

ಈ ಆದೇಶದಂತೆ ಮೆರವಣಿಗೆ, ಪ್ರತಿಭಟನಗಳು, ಸಭೆಗಳು, ಧ್ವನಿ ಹರಡುವ ಸಾಧನಗಳ ಬಳಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವಂತ ಚಟುವಟಿಕೆಗಳಿಗೆ ನಿಷೇಧವಿದೆ.

ಸಾಮಾಜಿಕ ಶಾಂತಿ ಕಾಪಾಡುವ ಉದ್ದೇಶದಿಂದ ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾಡಳಿತ ವಿನಂತಿಸಿದೆ.

ಅಪರಾಧ