ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇದು ಒಂದು ಪೂರ್ವ ನಿಯೋಜಿತ ಕೃತ್ಯ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಹತ್ಯೆ ಮಾಡುವವರ ಜೊತೆ ನಿಂತಿದೆ ಇದು ರಾಜ್ಯ ಸರ್ಕಾರ ದ ಗುಪ್ತಚರ ಇಲಾಖೆ ವೈಫಲ್ಯ ಎಂದು ಗುಡುಗಿದ್ದಾರೆ. ಮತ್ತೊಂದೆಡೆ ಶಾಸಕ ಹರೀಶ್ ಪೂಂಜಾ ಈ ಘಟನೆ ಗೆ ಪೊಲೀಸ್ ಇಲಾಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಹಾಸ್ ಶೆಟ್ಟಿ ಯ ಕಾರನ್ನು ಹಲವು ಬಾರಿ ಪೊಲೀಸ್ ಇಲಾಖೆ ತಪಾಸಣೆ ಮಾಡಿದ್ದಾರೆ ಆದ್ದರಿಂದ ಅವರಿಗೆ ಅವರ ಆತ್ಮ ರಕ್ಷಣೆಗೆ ಬೇಕಾದ ಆಯುಧ ಕೂಡ ಇಲ್ಲದಂತಾಯಿತು ಒಂದು ವೇಳೆ ಅವರ ಬಳಿ ಆತ್ಮ ರಕ್ಷಣೆಗೆ ಬೇಕಾದ ಆಯುಧ ಇದ್ದರೆ ಈ ರೀತಿ ಹತ್ಯೆ ಆಗುತ್ತಾ ಇರಲಿಲ್ಲ ಎನ್ನುವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ಹತ್ಯೆ ಪ್ರಕರಣ ಒಂದು ಬೂದಿ ಮುಚ್ಚಿದ ಕೆಂಡದಂತೆ ಆಗಿದ್ದು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

