ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ “ನನ್ನ ಹಾಡು ನನ್ನದು” ಕರೋಕೆ ಸಂಗೀತ ಕಾರ್ಯಕ್ರಮ

ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ “ನನ್ನ ಹಾಡು ನನ್ನದು” ಕರೋಕೆ ಸಂಗೀತ ಕಾರ್ಯಕ್ರಮ

ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ “ನನ್ನ ಹಾಡು ನನ್ನದು” ಕರೋಕೆ ಸಂಗೀತ ಕಾರ್ಯಕ್ರಮ 30 ಮಾರ್ಚ್ 2025ರಂದು ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯ ಮಡ್ತಿಲ ಪುರುಷೋತ್ತಮ ಸ್ಮಾರಕ ರಂಗಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಎಸ್.ಎನ್. ಮನ್ಮಥ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಐವರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಸಭಾಧ್ಯಕ್ಷತೆಯನ್ನು ವಹಿಸಿದರು. ವೇದಿಕೆಯಲ್ಲಿ ಆಕಾಶವಾಣಿ ಗಾಯಕಿ, ನ್ಯಾಯವಾದಿ ಸುಮಾ ಬಾಲಚಂದ್ರ, ದಯಾಳನ್ ಬಾರ್ಪನೆ, ಹೊನ್ನಪ್ಪ ಉದ್ದಂಪಡಿ, ಗಾಯಕಿ ಪುಷ್ಪಾವತಿ ಎಡಮಂಗಲ, ಭಾರತಿ ದೇರಾಜೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಚಿತೇಶ್ ಸಂಗೀತ ಬಳಗದ ಕಾರ್ಯದರ್ಶಿ ರೋಹಿತ್ ಬಾಂಜಿಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಅಧ್ಯಕ್ಷ ಲಕ್ಷ್ಮಣ್ ಪೆರುಮಾಲ್ ಹಾಜರಿದ್ದರು.

ಸಂಜೆಯ ಸಮಾರೋಪ ಸಮಾರಂಭದಲ್ಲಿ ರಾಜೇಶ್ ಬಾಂಜಿಕೋಡಿ, ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದು, ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಶಿವರಾಮ ನೆಕ್ರೆಪ್ಪಡಿ ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ವಿವಿಧ ಭಾಗಗಳಿಂದ ಹಲವಾರು ಗಾಯಕರು, ಗಾಯಕಿಯರು ಹಾಗೂ ಪುಟಾಣಿ ಗಾಯನ ಪ್ರತಿಭೆಗಳು ಭಾಗವಹಿಸಿದರು. ಗಾಯಕ ಬಾಲಚಂದ್ರ ಕಾಸರಗೋಡು, ರಂಗ ಕಲಾವಿದ ರಾಜೇಶ್ ರೈ, ಅಖಿಲ ನೆಕ್ರಾಜೆ, ಶೋಭಾ ರಾಮಚಂದ್ರ ಹಾಗೂ ಬಾಲಪ್ರತಿಭೆ ದೃತಿ ಐವರ್ನಾಡು ಅವರನ್ನು ಸನ್ಮಾನಿಸಲಾಯಿತು.

ಈ ಸುಂದರ ಗಾಯನ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ವಿಶೇಷಗೊಳಿಸಿದರು. ತೀರ್ಪುಗಾರರಾಗಿ ಆಕಾಶವಾಣಿ ಗಾಯಕಿ ಸುಮಾ ಕೆ.ಎಸ್., ಮಿಥುನ್ ರಾಜ್, ವಿದ್ಯಾ ಪುರ ಹಾಗೂ ಪದ್ಮರಾಜ್ ಚಾರ್ವಕ್ಕ ನಿಖರವಾದ ತೀರ್ಪು ನೀಡಿದರು. ನವೀನ್ ಬಾಂಜಿಕೋಡಿ ಮತ್ತು ಶ್ರೇಯಾ ಸುಳ್ಯ ಅವರ ನಿರೂಪಣೆ ಎಲ್ಲರ ಮನರಂಜನೆಗೆ ಕಾರಣವಾಯಿತು.

ಮನೋರಂಜನೆ