ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ರಾಶಿ ಚಿಂತನೆ ಹಾಗೂ ಸನ್ಮಾನ ಕಾರ್ಯಕ್ರಮ ಮಾ. 29 ರಂದು ನಡೆಯಿತು.

ಕೇರಳದ ದೈವಜ್ಞರಾದ ಪಂಕಜಾಕ್ಷ ಅವರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು.ಮಹೋತ್ಸವದ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ ಮಹೋತ್ಸವ ಯಶಸ್ವಿಯಾಗಿ ನಡೆಯಲು ಎಲ್ಲರ ಶ್ರಮ ಸಾಕಷ್ಟಿದೆ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕೋಶಾಧಿಕಾರಿ ಜತ್ತಪ್ಪ ರೈ ಯವರು ಮಹೋತ್ಸವದ ಅಯ ವ್ಯಯದ ಕುರಿತು ವಿವರ ನೀಡಿದರು. ಬಳಿಕ ದೈವಸ್ಥಾನದಲ್ಲಿ ಸ್ಥಾನಿಕರ‌ ಸಮಕ್ಷಮದಲ್ಲಿ ಪ್ರಾರ್ಥನೆ ನೆರವೇರಿಸಿ ಸೂಟೆ ಸಮರ್ಪಿಸಿದ ಹಿರಿಯರಾದ ಕುಂಞಕಣ್ಣ ಎ. ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಸ್ಥಾನಿಕರು ಹಾಗೂ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕುಟುಂಬದ ಯಜಮಾನ ಕುಂಞಿಕಣ್ಣ ಎ, ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ, ರಧೀಶನ್ ಅರಂಬೂರು, ಕಾರ್ಯಾಧ್ಯಕ್ಷರಾದ ರಾಧಾಕೃಷ್ಣ ಪರಿವಾರಕಾನ, ಕುಂಞಿರಾಮನ್ ಶ್ರೀ ಶೈಲಂ, ಪದ್ಮಯ್ಯ ಪಡ್ಪು, ಶ್ರೀಪತಿ ಭಟ್ ಮಜಿಗುಂಡಿ, ಕೊರಗಪ್ಪ ಮಾಸ್ತರ್ ಕಣಕ್ಕೂರು, ಗೋಕುಲ್ ದಾಸ್ ಸುಳ್ಯ, ಜಯಪ್ರಕಾಶ್ ಕುಂಚಡ್ಕ, ಧನಂಜಯ ಕುಂಚಡ್ಕ, ಪದ್ಮನಾಭ ನಾಯರ್ ಪರಿವಾರಕಾನ, ಶಿವರಾಮ ಗೌಡ ಕಲ್ಲೆಂಬಿ , ಗಣಪತಿ ಭಟ್ ಮಜಿಗುಂಡಿ, ಅಮ್ಮು ರೈ ಅರಂಬೂರು, ದಿನೇಶ್ ಕೋಲ್ಚಾರು, ನಾರಾಯಣ ನಾಯ್ಕ ಅರಂಬೂರು, ಶಿವ ಶಂಕರ ನಾಯಕ್ ಪಾಲಡ್ಕ, ಕುತ್ತಿಕೋಲು,ಕ್ಷೇತ್ರದ ಅಧ್ಯಕ್ಷ ಆರ್.ಕುಂಞಿಕಣ್ಣನ್ ಬೇಡಗಂ, ಪ್ರಧಾನ ಕಾರ್ಯದರ್ಶಿ ಕುಂಞಿಕೃಷ್ಣನ್,ಕೋಶಾಧಿಕಾರಿ ಶ್ರೀಧರನ್ ಪರಯಂಪಳ್ಳ, ಸುದೇಶ್ ಅರಂಬೂರು, ಚಂದ್ರಶೇಖರ ನೆಡ್ಚಿಲು, ಅನಿಲ್ ಕೆ.ಸಿ ಪರಿವಾರಕಾನ, ಗಂಗಾಧರ ಎನ್.ಎ, ರತ್ನಾಕರ ರೈ, ನಾರಾಯಣ ರೈ ಅರಂಬೂರು, ಶಿವರಾಮ ರೈ ಅರಂಬೂರು, ನಾರಾಯಣ ಪರಿವಾರಕಾನ, ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಆರಂತೋಡು ಅಧ್ಯಕ್ಷ ಪ್ರದೀಪ್ ಆರಂತೋಡು, ಅಲೆಟ್ಟಿ ಪ್ರಾದೇಶಿಕ ಸಮಿತಿ ಅಧ್ಯಕ್ಷರಾದ ಶ್ರೀಧರ ಕೂಳಿ ಯಡ್ಕ ಮತ್ತಿತರರು ಉಪಸ್ಥಿತರಿದ್ದರು.

ಭಾರತೀಯ ತೀಯಾ ಸಮಾಜ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮದ ತರವಾಡು ಮನೆತನದ ಪ್ರಮುಖರು ಮತ್ತು ಕುಟುಂಬಸ್ಥರು,ಮಹೋತ್ಸವದ ಉಪ ಸಮಿತಿಯ ಸಂಚಾಲಕರು,ಸಹ ಸಂಚಾಲಕರು ಹಾಗೂ ಸದಸ್ಯರು, ದೈವ ನರ್ತಕರು ಹಾಗೂ ಸ್ಥಳೀಯರು, ಗ್ರಾಮಸ್ಥರು ಭಾಗವಹಿಸಿದರು.

ಧಾರ್ಮಿಕ