
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಮಹಾಸಭೆ ನ.4 ರಂದುದು ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅಧ್ಯಕ್ಷರಾದ ಶ್ರೀಯುತ ವಿಶ್ವನಾಥ ಶೆಟ್ಟಿ ವಹಿಸಿದ್ದರು ಹಾಗೂ ಮುಖ್ಯ ಅತಿಥಿಯಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಉಪಸ್ಥಿತರಿದ್ದರು.


ಸಭೆಯ ಬಳಿಕ 2024 ನೇ ಸಾಲಿನ ನೂತನ ಸಮಿತಿ ರಚಿಸಲಾಗಿ ನೂತನ ಅಧ್ಯಕ್ಷರಾಗಿ ಮಧುಸೂಧನ ಸುಳ್ಯ ರನ್ನು ಆಯ್ಕೆ ಮಾಡಲಾಯಿತು. ಹಾಗೂ ಉಪಾಧ್ಯಕ್ಷರಾಗಿ ಲವ ದುಗಲಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಮಂಡೆಕೋಲು ಹಾಗೂ ಕೋಶಾಧಿಕಾರಿಯಾಗಿ ವಿಜಯಕುಮಾರ್ ನಡುಗಲ್ಲು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಸುಳ್ಯಹಾಗೂ ಜೊತೆ ಕಾರ್ಯದರ್ಶಿಗಳಾಗಿ ಶಿವಾನಂದ ಪಾಟೀಲ್ ಹಾಗೂ ವಿಶುಕುಮಾರ್ ಜಟ್ಟಿಪಳ್ಳ ಆಯ್ಕೆಯಾದರು. ಸಮಿತಿ ಸದಸ್ಯರುಗಳಾಗಿ ಮಣಿ ಗೂನಡ್ಕ
ಸಂದೀಪ್ ಉಬರಡ್ಕ , ದಿನೇಶ್ ಮರ್ಕಂಜ ,ಶಿಜು ಸುಳ್ಯ ನಗರ ಗೌತಮ್ ಉಬರಡ್ಕ ,ರಾಘವ ಕುಕ್ಕುಜಡ್ಕ,ಗಣೇಶ್ ಸುಳ್ಯ ನಗರ ವೇಣುಗೋಪಾಲ ತುಂಬೆತ್ತಡ್ಕ ಎಲಿಮಲೆ
ಪ್ರವೀಣ್ ದೋಣಿಪಳ್ಳ ಕೊಲ್ಲಮೊಗ್ರು,ಜನಾರ್ದನ ಮಂಡೆಕೋಲು ,ನಾರಾಯಣ ಸುಳ್ಯ
ಇವರುಗಳು ಆಯ್ಕೆಯಾದರು.
