
ಮಂಗಳೂರು: ಶಾಲಾಬಸ್ಸಿಂದ ಇಳಿದ ವಿದ್ಯಾರ್ಥಿ ಮನೆಗೆ ತೆರಳದೆ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾವೂರು ಜಂಕ್ಷನ್ನಲ್ಲಿ ನಡೆದಿದೆ.

ಅಶ್ಲೇವ್ (14) ನಾಪತ್ತೆಯಾದ ವಿದ್ಯಾರ್ಥಿ.ಕಾವೂರಿನ ಮೀಟ್ ಕಾಂಪ್ಲೆಕ್ಸ್ ನ ನಿವಾಸಿ ಉಮೇಶ್ ಅವರ ಪುತ್ರನಾಗಿರುವ ಈತ ಶಕ್ತಿ ರೆಸಿಡೆನ್ಸಿ ಸ್ಕೂಲ್ನಿಂದ ನಿನ್ನೆ ಮಧ್ಯಾಹ್ನ 1:30ಕ್ಕೆ ಸ್ಕೂಲ್ ಬಸ್ನಲ್ಲಿ ಬಂದು ಕಾವೂರು ಜಂಕ್ಷನ್ನಲ್ಲಿ ಇಳಿದಿದ್ದಾನೆ. ಆದರೆ ಮನೆಗೆ ಬಂದಿಲ್ಲ. ಈ ಹುಡುಗ ಎಲ್ಲಾದರೂ ಕಂಡುಬಂದಲ್ಲಿ ಕಾವೂರು ಪೊಲೀಸ್ ಠಾಣೆಯ ಈ 08242220533 ಈ ನಂಬರ್ ಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ