ಬೆಳ್ಳಂಬೆಳಗ್ಗೆ ಸದ್ದಿಲ್ಲದೆ ಬಿಗಿ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌..!

ಬೆಳ್ಳಂಬೆಳಗ್ಗೆ ಸದ್ದಿಲ್ಲದೆ ಬಿಗಿ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌..!

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದ ನಟ ದರ್ಶನ್ ಎಡವಟ್ಟು ಮಾಡಿಕೊಂಡು  ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿದ್ದಾನೆ.

ಗುರುವಾರ ಬೆಳಗಿನ ಜಾವ ಬೆಂಗಳೂರಿನ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಸೂಕ್ತ ಭದ್ರತೆಯ ಮೂಲಕ ನಟ ದರ್ಶನ್ ನನ್ನು ಪೊಲೀಸರರು ಕರೆದೊಯ್ದಿದ್ದು ಇನ್ನುಂದೆ ದರ್ಶನ್ ಗೆ ಬಳ್ಳಾರಿ ಜೈಲೇ ಆಸರೆಯಾಗಲಿದೆ.

ಮುಂಜಾನೆ 4.30ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್‌ನನ್ನು ಪೊಲೀಸರು ಕರೆದೊಯ್ದಿದ್ದಾರೆ.  ಇತ್ತೀಚೆಗೆ ದರ್ಶನ್ ಜೈಲಿನಲ್ಲಿ ಕುಖ್ಯಾತ ರೌಡಿಗಳೊಂದಿಗೆ ಚೇರ್‌ನಲ್ಲಿ ಕುಳಿತು ಕಾಫಿ ಕುಡಿಯುತ್ತಾ ಸಿಗರೇಟ್‌ ಸೇದುತ್ತಿರುವ ಫೋಟೊ ವೈರಲ್ ಆಗಿತ್ತು. ಇದರ ಬೆನ್ನಿಗೆ ದರ್ಶನ್‌ ಜೈಲಿನಿಂದಲೇ ವೀಡಿಯೊ ಕಾಲ್‌ ಮಾಡಿರುವುದು ಕೂಡ ಬಹಿರಂಗವಾಗಿ ಸರಕಾರ ವಿಪರೀತ ಮುಜುಗರಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ

ರಾಜ್ಯ