ದ.ಕ. ಜಿಲ್ಲೆಯ ಅಡಿಕೆ ಬೆಳೆಗಾರರ ದುಖಃಕ್ಕೆ ಧ್ವನಿಯಾದ ಬ್ರಿಜೇಶ್ ಚೌಟ. : ಹಳದಿ ಎಲೆ ರೋಗ ಅನುಭವಿಸುತ್ತಿರುವ ನಷ್ಟದ ಕುರಿತು ಲೋಕಸಭೆಯಲ್ಲಿ ಗಮನ ಸೆಳೆದ ಸಂಸದ

ದ.ಕ. ಜಿಲ್ಲೆಯ ಅಡಿಕೆ ಬೆಳೆಗಾರರ ದುಖಃಕ್ಕೆ ಧ್ವನಿಯಾದ ಬ್ರಿಜೇಶ್ ಚೌಟ. : ಹಳದಿ ಎಲೆ ರೋಗ ಅನುಭವಿಸುತ್ತಿರುವ ನಷ್ಟದ ಕುರಿತು ಲೋಕಸಭೆಯಲ್ಲಿ ಗಮನ ಸೆಳೆದ ಸಂಸದ

ನವದೆಹಲಿ :   ಹಳದಿ ಎಲೆ ರೋಗ ಸಮಸ್ಯೆ ಬಗ್ಗೆ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆ ಗಮನಸೆಳೆದಿದ್ದಾರೆ.

ಒಂದೇ ಹಂತದಲ್ಲಿ ಪರಿಹಾರ ನೀಡುವ ಮೂಲಕ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ರೋಗ ತಡೆಗೆ ಸಂಬಂಧಿಸಿ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಹಣಕಾಸು ನೆರವನ್ನೂ ನೀಡಬೇಕು ಎಂದು ಲೋಕಸಭೆಗೆ ಮನವಿ ಮಾಡಿದ ಸಂಸದ ಚೌಟ, ರೈತರ ಈ ಸಮಸ್ಯೆಗೆ ತುರ್ತು ಕ್ರಮದ ಅಗತ್ಯವಿದೆ. ದ.ಕ.ದಲ್ಲಿ ಶೇ.50ರಷ್ಟು ಕೃಷಿ ಭೂಮಿಯಲ್ಲಿ ಅಡಕೆ ಬೆಳೆಯಲಾಗುತ್ತದೆ. ಹೀಗಾಗಿ, ಈ ಸಮಸ್ಯೆಗೆ ಪರಿಹಾರ ಅತ್ಯಗತ್ಯವಿದೆ ಎಂದು ವಿವರಿಸಿದ್ದಾರೆ.ಜಿಲ್ಲೆಯಲ್ಲಿ 1.74 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದ್ದು, 84,157 ಹೆಕ್ಟೇರ್ ಭೂಮಿಯಲ್ಲಿ ಅಡಕೆ ಬೆಳೆಯಲಾಗಿದೆ. ಆದರೆ ಫೈಟೋಪ್ಲಾಸ್ಮಾದಿಂದ ಉಂಟಾಗಿರುವ ಹಳದಿ ಎಲೆ ರೋಗದಿಂದಾಗಿ ಭಾರೀ ಪ್ರಮಾಣದ ಬೆಳೆ ನಾಶವಾಗಿದ್ದು, ರೈತರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ.

16000 ಹೆಕ್ಟೇರ್ ಕೃಷಿ ಪ್ರದೇಶದ ಅಡಕೆ ನಾಶವಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆ ವರದಿ ಮಾಡಿದ್ದು, ಅವರ 6000 ಕೃಷಿಕರು ಹಳದಿ ಎಲೆ ಕಂಟಕದ ಬಗ್ಗೆ ಸಮಸ್ಯೆ ತೋಡಿಕೊಂಡಿದ್ದಾರೆ ಎಂದು ಬ್ರಿಜೇಶ್ ಚೌಟ ಸದನಕ್ಕೆ ತಿಳಿಸಿದ್ದಾರೆ

ರಾಜ್ಯ