

ಪ್ರಸೂತಿ ತಜ್ಞೆರು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆಂದು ಕೆ.ಆರ್.ಎಸ್. ಪಕ್ಷದವರು ಬಂದು ಪ್ರತಿಭಟಿಸಿದ ಬೆನ್ನಲ್ಲೆ ಎಲ್ಲರ ಕಣ್ಣು ಸರಕಾರಿ ಆಸ್ಪತ್ರೆಕಡೆ ಚಿತೈಸಿದೆ. ಈ ಬಗ್ಗೆ ಸಿಬ್ಬಂಗಳಲ್ಲಿ ಈ ಬಗ್ಗೆ ಮಾತಬಗ್ಗೆ ಅಸಮದಾನ ವ್ಯಕ್ತ ಪಡಿಸಿದ ಘಟನೆಯೂ ಇಂದು ನಡೆದಿದೆ.

ಸಭೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕರುಣಾಕರರು ಪ್ರಸೂತಿ ತಜ್ಞೆರು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ನನಗೆ ಯಾವುದೇ ದೂರು ಬಂದಿಲ್ಲ , ಕೆ.ಆರ್.ಎಸ್. ಪಕ್ಷದವರು ಪ್ರತಿಭಟನೆ ನಡೆಸಿದರು , ಈಗ ಈ ಕುರಿತು ಶಾಸಕರು ಸಿಬ್ಬಂದಿಗಳ ಅಹವಾಲು ಕೇಳಲು ಆಗಮಿಸಿದ್ದಾರೆ ಎಂದು ಹೇಳಿದರು.
ಬಳಿಕ ಮಾತನಾಡಿದ ಶಾಸಕರು, ಎಲ್ಲ ಮನೆಯಲ್ಲಿಯೂ ಸಣ್ಣ ಪುಟ್ಟ ಘಟನೆಗಳು ಆಗುತ್ತದೆ. ನಾವು ಕೆಲಸ ಮಾಡುವ ಜಾಗವೂ ಅದೇ ರೀತಿ ಸಣ್ಣ ಸಣ್ಣ ವಿಷಯಗಳನ್ನು ನಾವೇ ಸರಿ ಪಡಿಸಿಕೊಳ್ಳಬೇಕು” ಎಂದು ಹೇಳಿದರು.
ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರು ಮಾತನಾಡಿ ಖಾಸಗಿ ಆಸ್ಪತ್ರೆಗೆ ಸಮಾನವಾದ ಎಲ್ಲ ವ್ಯವಸ್ಥೆಗಳು ಇಲ್ಲಿ ಇದೆ. ಗುಣಮಟ್ಟದ ಚಿಕಿತ್ಸೆ ನೀಡುವ ವೈದ್ಯರೂ ಇಲ್ಲಿದ್ದಾರೆ. ಸಿಬ್ಬಂದಿಗಳ ದೂರುಗಳಿದ್ದರೆ ಅದನ್ನು ಆಡಳಿತಾಧಿಕಾರಿಗಳಿಗೆ ನೀಡಬೇಕು .ಪಕ್ಷಗಳಿಗೆ ಹೇಳುವುದು ಸರಿಯಲ್ಲ ಎಂದರು.
ಬಳಿಕ ಸಬ್ಬಂದಿಗಳಿಗೆ ಸಮಸ್ಯೆ ಬಗ್ಗೆ ಹೇಳುವಂತೆ ತಿಳಿಸಲಾಯಿತು.
ಸಭೆಯಲ್ಲಿದ್ದ ಶುಶ್ರೂಷಕಿಯರು ಮಾತನಾಡಿ ಪ್ರಸೂತಿ ತಜ್ಞರು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ, ಕೈಗೆ ಸಿಕ್ಕಿದನ್ನು ತಮ್ಮ ಮೇಲೆಯೇ ಎಸೆಯುತ್ತಾರೆ, ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯಿದೆ.ಎಂದು ಒಬ್ಬೊಬ್ಬರಾಗಿ ಆಸ್ಪತ್ರೆಯ ಪ್ರಸೂತಿ ತಜ್ಞರಿಂದ ಆಗಿರುವ ಸಮಸ್ಯೆಯ ಕುರಿತು ಹೇಳ ತೊಡಗಿದರು. ಕೆಲ ಸಮಯ ಸಮಸ್ಯೆ ಆಲಿಸಿದ ಶಾಸಕರು, ವೈದ್ಯರಲ್ಲಿಯೂ ಮಾತನಾಡುತ್ತೇವೆ. ಹೊಂದಾಣಿಕೆಯಿಂದ ಹೋಗುವಂತೆ ತಿಳಿಸಲಾಗುವುದು. ಆಸ್ಪತ್ರೆಗೆ ಖಾಯಂ ತಜ್ಙರ ನೇಮಕಕ್ಕೆ ಸರಕಾರಕ್ಕೆ ಬರೆಯುತ್ತೇವೆ ಎಂದು ಹೇಳಿದರು.
ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ನ.ಪಂ. ಸದಸ್ಯ ಬುದ್ಧ ನಾಯ್ಕ, ಸುಳ್ಯ ಸಿ.ಎ. ಬ್ಯಾಂಕ್ ನಿರ್ದೇಶಕ ಕೇಶವ ಸಿ.ಎ., ಶಿವಪ್ರಸಾದ್ ನಡುತೋಟ, ಪ್ರಸಾದ್ ಕಾಟೂರು ಇದ್ದರು.


