ರಸ್ತೆ ಬದಿ ಮನೆಯ ಮೇಲೆ ಮಗುಚಿ ಬಿದ್ದ ಕಾರು: ಚಾಲಕ ಹಾಗೂ ಮನೆಯವರು ಅಪಾಯದಿಂದ ಪಾರು

ರಸ್ತೆ ಬದಿ ಮನೆಯ ಮೇಲೆ ಮಗುಚಿ ಬಿದ್ದ ಕಾರು: ಚಾಲಕ ಹಾಗೂ ಮನೆಯವರು ಅಪಾಯದಿಂದ ಪಾರು

ಸೋಮವಾರಪೇಟೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹೊಂಡಕ್ಕೆ ಉರುಳಿ ಮನೆಯ ಮೇಲೆ ಬಿದ್ದಿರುವ ಘಟನೆ ಹೊಸತೋಟ ಗ್ರಾಮದಲ್ಲಿ ನಡೆದಿದೆ.

ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುತ್ತಿದ್ದ

ಕಾಗಡಿಕಟ್ಟೆಯ ಸೂರ್ಯ ಎಂಬಾತ ಚಾಲಿಸುತ್ತಿದ್ದ ಕಾರು ಹೊಸತೋಟದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಎಡಬದಿಯ ಗುಂಡಿಗೆ ಮಗುಚಿಕೊಂಡಿದೆ. ಪರಿಣಾಮ ಸನಿಹದಲ್ಲಿಯೇ ಇದ್ದ ಖತೀಜ ಎಂಬುವವರ ಮನೆಗೆ ಹಾನಿಯಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

.

ರಾಜ್ಯ