
ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಾಲಾವಧಿ ಜಾತ್ರೋತ್ಸವವು ಪ್ರಾರಂಭವಾಗಿದ್ದು

ಇಂದು ಬೆಳಿಗ್ಗೆ ಗಣಪತಿ ಹೋಮ, ನಂತರ ಧ್ವಜಾರೋಹಣ, ರಾತ್ರಿ ಸಂಕ್ರಮಣ ವಾಲಸಿರಿ ಕೊಡಿಬಂಡಿ ಉತ್ಸವ ನಡೆಯಿತು.ಮೇ.3ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದ್ದು, ಮೇ.4ರಂದು ಬೆಳಗ್ಗಿನ ಜಾವ ನಡುಬಂಡಿ ಉತ್ಸವ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.

ಮೇ.4ರಂದು ಬೆಳಿಗ್ಗೆ ಕಿರಿಯರ ನೇಮ, ನಾಯರ್ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಸಂಕ್ರಮಣಪೂಜೆ – ಸಮಾರಾಧನೆ ನಡೆಯಲಿದೆ.
ಮೇ.5ರಂದು ಬೆಳಿಗ್ಗೆ ವಾಲಸಿರಿ ಕಡೆಬಂಡಿ ಉತ್ಸವ, ಹಿರಿಯರ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಆರಾಟ, ಧ್ವಜಾವರೋಹಣ, ಅಂಬುಕಾಯಿ , ಹಣ್ಣಕಾಯಿ ನಡೆಯಲಿದೆ.
