
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಸದ್ದಿಲ್ಲದೆ ಧಾಖಲೆಯೊಂದರ ಸೃಷ್ಠಿಗೆ ಕಾರಣವಾಗಿದೆ, ಚುನಾವಣೆಯ ಸಂದರ್ಭ ರಾಷ್ಟ್ರೀಯ ಪಕ್ಷಗಳು ಮತದಾನ ಕೇಂದ್ರದ ಬಳಿ ಬೂತ್ ಗಳನ್ನು ತೆರೆದು ಕುಳಿತಿರುವುದನ್ನು ನೀವು ಕಂಡಿರಬಹುದು ಆದರೆ ಈ ಬಾರಿ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದು ನೋಟ ಪರ ಮತದಾರರು ಮತದಾನ ಕೇಂದ್ರದ ಬಳಿ ಬೂತ್ ಸ್ಥಾಪಿಸಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಇದು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ನ ಇಚ್ಲಂಪಾಡಿಯಲ್ಲಿ ಕಂಡುಬಂದ ದೃಶ್ಯ..


