ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಚುನಾವಣೆ ಸಹಕಾರ ಭಾರತಿ ಅಭ್ಯರ್ಥಿಯಾಗಿ ಬಿ ಜೆ ಪಿ ಪ್ರಮುಖ ಎಸ್. ಎನ್ ಮನ್ಮಥ: ನಾಳೆ ನಾಮಪತ್ರ ಸಲ್ಲಿಕೆ.

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಚುನಾವಣೆ ಸಹಕಾರ ಭಾರತಿ ಅಭ್ಯರ್ಥಿಯಾಗಿ ಬಿ ಜೆ ಪಿ ಪ್ರಮುಖ ಎಸ್. ಎನ್ ಮನ್ಮಥ: ನಾಳೆ ನಾಮಪತ್ರ ಸಲ್ಲಿಕೆ.

ದಕ್ಷಿಣ ಕನ್ನಡ ಜಿಲ್ಲೆಯ ಎಸ್ .ಸಿ.ಡಿ.ಸಿ.ಸಿ ಬ್ಯಾಂಕ್ ಸುಳ್ಯ ಕ್ಷೇತ್ರದ ಸಹಕಾರ ಭಾರತಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಎನ್‌.ಮನ್ಮಥ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

23 ವೋಟರ್ಸ್ ಪವರ್ ಇರುವ ಈ ಚುನಾವಣೆಯಲ್ಲಿ 16 ಸಹಕಾರ ಭಾರತಿ ಹಾಗೂ 7 ಮಂದಿ ಕಾಂಗ್ರೆಸ್ ಬೆಂಬಲಿಗರು ಇದ್ದಾರೆ. ಈ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದೆ. ಈ ಸಲ ಎಸ್.ಎ ಮನ್ಮಥ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ. ಈ ಚುನಾವಣೆ ಐದು ವರ್ಷಕ್ಕೊಮ್ಮೆ ನಡೆಯಲಿದೆ. ಕಳೆದ ಸಲ ಅಡ್ಡ ಮತನದಾನ ನಡೆದುದ್ದರಿಂದ ಸಹಕಾರ ಭಾರತಿಗೆ ಸೋಲಾಗಿತ್ತು. ಬಳಿಕ ನಡೆದ ವಿದ್ಯಮಾನದಲ್ಲಿ ಬಿಜೆಪಿ ಭಾರೀ ಬೆಲೆ ತೆರಬೇಕಾಗಿ ಬಂದಿತ್ತು.

ರಾಜ್ಯ