
ಸುಂಟಿಕೊಪ್ಪ ಬಳಿಯ ಏಳನೇ ಮೈಲಿನಲ್ಲಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಹುಣಸೂರಿನ ವ್ಯಕ್ತಿ ಸಂತೋಷ್ (30) ಮೃತ ದುರ್ದೈವಿ. ಕೆದಕಲ್ ನಿವಾಸಿ ಚೇತನ್ (35) ಗಂಭೀರಗಾಯಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.