ಉಡುಪಿ: ದ್ವಿಚಕ್ರ ವಾಹನ , ಬಸ್ ನಡುವೆ ಅಪಘಾತ: ಸವಾರ ಸಾವು , ಮತ್ತೋರ್ವ ಗಂಭೀರ

ಉಡುಪಿ: ದ್ವಿಚಕ್ರ ವಾಹನ , ಬಸ್ ನಡುವೆ ಅಪಘಾತ: ಸವಾರ ಸಾವು , ಮತ್ತೋರ್ವ ಗಂಭೀರ

ಉಡುಪಿ : ಜ. 26 ರಂದು ಶುಕ್ರವಾರ ತಡರಾತ್ರಿ ಕರಾವಳಿ-ಮಲ್ಪೆ ರಸ್ತೆಯ ಪಂಡುಬೆಟ್ಟು ಎಂಬಲ್ಲಿ ದ್ವಿಚಕ್ರ ವಾಹನವೊಂದು ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.

ಮೂಲಗಳ ಪ್ರಕಾರ, ಮಣಿಪಾಲದ ರೆಸ್ಟೋರೆಂಟ್ ಒಂದರಲ್ಲಿ ಉದ್ಯೋಗಿಯಾಗಿರುವ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬಸ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯ