
ಸುಳ್ಯದ ಸೋಣಂಗೇರಿ ಪೇಟೆಯಲ್ಲಿ ಹಾಕಲಾಗಿದ್ದ ರಾಮ ಜನ್ಮ ಭೂಮಿ ಅಯೋಧ್ಯೆಗೆ ಶುಭ ಕೋರುವ ಬ್ಯಾನರ್ ನಲ್ಲಿ ಹಾಕಲಾದ ಹೆಸರಿಗೆ ಮಸಿ ಬಳಿದಿರುವ ಘಟನೆ ನಡೆದಿದೆ.

ಅಯೋಧ್ಯೆ ಶುಭಕೋರುವ ಬ್ಯಾನರ್ ಗೆ ಸುಳ್ಯ ಮತ್ತು ಅಡ್ಕಾರ್ ನಲ್ಲಿ ಹಾನಿಯಾದ ಬಳಿಕ ಇದೀಗ ಸೋಣಂಗೇರಿಯಲ್ಲೂ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಬ್ಯಾನರ್ ನಲ್ಲಿ 15 ಹೆಸರುಗಳಿದ್ದು, ಒಂದು ಹೆಸರು ಬಿಟ್ಟು ಉಳಿದೆಲ್ಲಾ ಹೆಸರಿಗೆ ಮಸಿ ಬಲಿದಿರುವುದಾಗಿ ತಿಳಿದುಬಂದಿದೆ.
