ತಮಿಳು ಕಾರ್ಮಿಕರಿಗೆ ಶೇ.20 ಬೋನಸ್ ಲಭಿಸುವ ನಿರೀಕ್ಷೆ: ತೋಟ ತೊಲಿಳಾಲರ್ ಸಂಘದ ಅಧ್ಯಕ್ಷ ಚಂದ್ರಲಿಂಗಂ ಹೇಳಿಕೆ

ತಮಿಳು ಕಾರ್ಮಿಕರಿಗೆ ಶೇ.20 ಬೋನಸ್ ಲಭಿಸುವ ನಿರೀಕ್ಷೆ: ತೋಟ ತೊಲಿಳಾಲರ್ ಸಂಘದ ಅಧ್ಯಕ್ಷ ಚಂದ್ರಲಿಂಗಂ ಹೇಳಿಕೆ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ವಿಭಾಗದ ನೆಡುತೋಪುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಬಾಕಿ ಇರುವ ಬೋನಸ್‌ನ್ನು ತುರ್ತಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತೋಟ ತೊಲಿಳಾಲರ್ ಸಂಘದ ವತಿಯಿಂದ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ.ಮನವಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಗುಣಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತೋಟ ತೊಲಿಳಾಲರ್ ಸಂಘದ ಅಧ್ಯಕ್ಷ ಚಂದ್ರಲಿಂಗಂ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ರವರನ್ನು ದಿನಾಂಕ 14.06.2023ರಂದು ನಿಗಮದ ಕೇಂದ್ರ ಕಛೇರಿ ಬೆಂಗಳೂರು ಇಲ್ಲಿ ಭೇಟಿ ಮಾಡಿ ರಬ್ಬರ್, ವಿಭಾಗಗಳ ನೆಡುತೋಪುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ 2021- 22ನೇ ಸಾಲಿನ ಬಾಕಿ ಇರುವ ಬೋನಸ್‌ಅನ್ನು ತುರ್ತಾಗಿ ನೀಡಬೇಕೆಂಬುದಾಗಿ ಹಾಗೂ 2022-23ನೇ ಸಾಲಿಗೂ ಕೂಡ ಶೇ.20ರಷ್ಟು ಬೋನಸ್ ಅನ್ನು ಸಕಾಲದಲ್ಲಿ ನೀಡುವಂತೆ ಮನವಿ ಸಲ್ಲಿಸಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು. ಮಾನ್ಯ ವ್ಯವಸ್ಥಾಪಕ ನಿರ್ದೇಶಕರವರು ನಮ್ಮ ಮನವಿಗೆ ಗುಣಾತ್ಮಕವಾಗಿ ಸ್ಪಂದಿಸಿರುತ್ತಾರೆ.

2021-22ನೇ ಸಾಲಿಗೆ ಶೇ.20ರಷ್ಟು ಬೋನಸ್ ನೀಡುವಂತೆ ನಿಮ್ಮ ಬೇಡಿಕೆ ಇದ್ದು ಈಗಾಗಲೇ ಶೇ.8.33ರಷ್ಟನ್ನು ನೀಡಲಾಗಿದೆ ಉಳಿದಂತೆ ಬಾಕಿ ಬೋನಸ್ ಅನ್ನು ಲೆಕ್ಕ ಹಾಕಿ ಪ್ರಸ್ತುತ ನೆಡೆಯುವ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ಆದಷ್ಟು ಬೇಗ ಜುಲೈ-2023ನೇ ಮಾಹೆಯಲ್ಲಿ ನೀಡುವುದಾಗಿ ವ್ಯವಸ್ಥಾಪಕ ನಿರ್ದೇಶಕರವರರು ಸ್ಪಷ್ಟಪಡಿಸಿರುತ್ತಾರೆ. ಹಾಗೂ 2022-23ನೇ ಸಾಲಿಗೂ ಕೂಡ ಶೇ.20ರಷ್ಟು ಬೋನಸ್ ಅನ್ನು ಸಕಾಲದಲ್ಲಿ ಮಂಡಳಿ ಸಭೆಗೆ ಮಂಡಿಸಿ ಮಂಜೂರಾತಿ ಪಡೆದು ವಾರ್ಷಿಕ ಸಾಮಾನ್ಯ ಸಭೆ ನೆಡೆದ ನಂತರದಲ್ಲಿ ನೀಡುವುದಾಗಿ ಕೂಡ ಸ್ಪಷ್ಟಿಕರಿಸಿರುತ್ತಾರೆ. ರಬ್ಬರ್ ವಿಭಾಗಗಳ ನೆಡುತೋಪುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಆಗಿಂದಾಗ್ಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿರುತ್ತಾರೆ. ಕಾರ್ಮಿಕರು ಉತ್ತಮವಾಗಿ ನಿಗಮದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮೂಲಕ ನಿಗಮಕ್ಕೆ ಉತ್ತಮ ಲಾಭ ತರುವಲ್ಲಿ ಶ್ರಮಿಸಬೇಕೆಂದು ಕೋರಿರುತ್ತಾರೆ. ಮಾನ್ಯ ವ್ಯವಸ್ಥಾಪಕ ನಿರ್ದೇಶಕರವರು ನಮ್ಮೊಂದಿಗೆ ಉತ್ತಮವಾಗಿ ಸ್ಪಂದಿಸಿರುತ್ತಾರೆ ಹಾಗೂ ಉತ್ತಮ ಭರವಸೆಗಳನ್ನು ನೀಡಿರುತ್ತಾರೆ. ಮಾನ್ಯ ವ್ಯವಸ್ಥಾಪಕರವರ ಸ್ಪಂದನೆಯು ನಮಗೆ ಸಂತೋಷ ಹಾಗೂ ಕೆಲಸ ನಿರ್ವಹಿಸಲು ಉತ್ಸಾಹ ತಂದಿರುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್‌ ಕೊಕ್ಕೊ, ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್, ತೋಟ ತೊಲಿಳಾಲರ್ ಸಂಘದ ಪದಾಧಿಕಾರಿಗಳಾದ ಎಂ.ಎಸ್.ಕುಮಾರ್, ಗಣೇಶ್ ಉಪಸ್ಥಿತರಿದ್ದರು.

ರಾಜ್ಯ