ಬಡವರಿಗೆ ಅಕ್ಕಿ ಕೊಡಲು ಬಿಡದೆ ಬಿಜೆಪಿ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ: ಸುಳ್ಯಕ್ಕೆ ಸ್ಥಾನಮಾನ ದೊರೆಯುವಂತಾಗಲಿ : ವೆಂಕಪ್ಪ ಗೌಡ.

ಬಡವರಿಗೆ ಅಕ್ಕಿ ಕೊಡಲು ಬಿಡದೆ ಬಿಜೆಪಿ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ: ಸುಳ್ಯಕ್ಕೆ ಸ್ಥಾನಮಾನ ದೊರೆಯುವಂತಾಗಲಿ : ವೆಂಕಪ್ಪ ಗೌಡ.

ಒಂದು ಕಡೆ ಅಕ್ಕಿ ಉಚಿತವಾಗಿ ನೀಡಲೇಬೇಕು ಎನ್ನುತ್ತಾ ಮತ್ತೊಂದು ಕಡೆ ಅಕ್ಕಿ ನೀಡದಂತೆ ತಡೆಯುವ ಹುನ್ನಾರವನ್ನು ಮಾಡುತ್ತಿದ್ದು ಇದು ಬಿಜೆಪಿಯವರ ದ್ವಿಮುಖ ನೀತಿಯನ್ನು ತೋರಿಸುತ್ತದೆ, ರಾಜ್ಯ ಸರಕಾರ ಕೇಂದ್ರಕ್ಕೆ ಪುಕ್ಸಟ್ಟೆ ಅಕ್ಕಿ ಕೊಡಿ ಎಂದು ಕೇಳುತ್ತಿಲ್ಲ, ದುಡ್ಡು ಕೊಟ್ಟು ಖರೀದಿ ಮಾಡಲು, ಬಿಜೆಪಿಯವರು ಏನೇ ಮಾಡಿದರು ಸರಕಾರ ಯಾವುದೇ ಬೆಲೆ ತೆತ್ತಾದರು ರಾಜ್ಯದ ಜನತೆಗೆ ಅಕ್ಕಿವಿತರಣೆ ಮಾಡಲಿದ್ದು, ವಿತರಣೆ ಸಂದರ್ಭ ನೀಡುವ ಅಕ್ಕಿಗೆ ಸಾಗಾಣಿಕಾ ವೆಚ್ಚ ಹೆಚ್ಚಾಗಿ, ದರ ನಿಗದಿಯಾಗಲೂ ಬಹುದು ಹಾಗೇನಾದರು ಜನರು ಹಣ ನೀಡಿ ಅಕ್ಕಿ ಪಡೆಯಬೇಕಾದ ಅನಿವಾರ್ಯತೆ ರಾಜ್ಯದಲ್ಲಿ ಬಡ ಜನರಿಗೆ ಒದಗಿ ಬಂದಲ್ಲಿ ಅದಕ್ಕೆ ಬಿಜೆಪಿಯವರೇ ನೇರ ಹೊಣೆಯಾಗಲಿದ್ದಾರೆ ಎಂದು ನಗರ ಪಂ. ಸದಸ್ಯ ಎಂ .ವೆಂಕಪ್ಪ ಗೌಡ ಹೇಳಿದ್ದಾರೆ.ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದೀ ಗೋಷ್ಟಿ ನಡೆಸಿ ಮಾತನಾಡಿ ಬಿಜೆಪಿಯವರು ಬಡವರ ಬಗ್ಗೆ ಕಾಳಜಿಯಿಲ್ಲದ ಶ್ರೀಮಂತರ ಪಾರ್ಟಿ, ಬಿಜೆಪಿಯವರು ಇಷ್ಟು ಕೀಳುಮಟ್ಟದ ರಾಜಕೀಯ ಮಾಡುತ್ತಾರೆ ಎಂದು ತಿಳಿದಿರಲಿಲ್ಲ.ಎಥೆನಾಲ್ ಮಾಡಲು ಅಕ್ಕಿ ನೀಡುವವರು ಬಡವರ ಹೊಟ್ಟೆ ತುಂಬಿಸಲು ಅಕ್ಕಿ ನೀಡುತ್ತಿಲ್ಲ ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.

ಸುಳ್ಯಕ್ಕೆ ಸ್ಥಾನಮಾನ ದೊರೆಯಲಿ.

ಸುಳ್ಯಕ್ಕೆ ಸ್ಥಾನಮಾನ ಸಿಗುವಂತಾಗಬೇಕು ಎನ್ನುವುದು ಬಹುದಿನದ ಬೇಡಿಕೆಯಾಗಿತ್ತು, ಚುನಾವಣಾ ಸಂದರ್ಭ ಪಕ್ಷಕ್ಕೆ ತೊಂದರೆಯಾಗದಿರಲಿ ಎಂದು ಸ್ಥಾನಮಾನಕ್ಕೆ ಒತ್ತಾಯ ಮಾಡಿರಲಿಲ್ಲ ಆದರೆ ಈಗ ಸರಕಾರ ಬಂದಿದೆ, ಸುಳ್ಯದಲ್ಲಿ ಅರ್ಹರನ್ನು ಆಯ್ಕೆ ಮಾಡಿ ಸರಕಾರದ ನಿಗಮ ಮಂಡಳಿಯಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ .

ಸುಳ್ಯ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ ಮುಖಂಡರ ಅಮಾನತು ಹಾಗೂ ಕೆಲವು‌ ನಾಯಕರಿಗೆ ಶೋಕಾಸ್ ನೋಟೀಸ್ ನೀಡಿರುವುದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಲ್ಲವೂ ಸರಿಯಾಗಿ ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ . ಎಲ್ಲರನ್ನೂ ಒಟ್ಟು ಸೇರಿಸಿ ಪಕ್ಷ ಸಂಘಟನೆ‌ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷರೇ ಸೂಚನೆ ನೀಡಿದ್ದಾರೆ. ಅದೇ ನಿಲುವನ್ನು ಎಲ್ಲರೂ ಪಾಲನೆ ಮಾಡಬೇಕು. ಬ್ಲಾಕ್ ಕಾಂಗ್ರೆಸ್ ಸಮಿತಿ ವಿಸರ್ಜನೆ ಮಾಡಿರುವುದು ಅಧ್ಯಕ್ಷರ ಅಧಿಕಾರ. ಸಮಿತಿ ಪುನರ್ ರಚನೆ ಮಾಡುವ ಸಂದರ್ಭದಲ್ಲಿ ಕೆಲಸ ಮಾಡುವವರಿಗೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಮುಖಂಡರಾದ‌ ಕೆ.ಗೋಕುಲ್‌ದಾಸ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.

ರಾಜ್ಯ