
ಬೆಳ್ತಂಗಡಿ: ಮಂಗಳೂರಿನ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ನಡೆದ ಹಿಂದಿನ ದಿನ ಬೆಳ್ತಂಗಡಿಯ
ಬೆಂದ್ರಾಳದಲ್ಲಿ ಸ್ಯಾಟಲೈಟ್ ಫೋನ್ ಹೋಗಿರುವುದು
ಗುಪ್ತಚರ ಮೂಲಗಳು ಕರಾವಳಿಯ ದಟ್ಟಾರಣ್ಯ ಪ್ರದೇಶದಲ್ಲಿ ಚಟುವಟಿಕೆಗಳು ನಡೆದಿರುವ
ಬಗ್ಗೆ ಸ್ಥಳೀಯರು ತಿಳಿಸಿದಂತೆ ಮಾದ್ಯಮದಲ್ಲಿ ಬಿತ್ತರವಾಗಿರುವ ಹಿನ್ನಲೆಯಲ್ಲಿ ಪೊಲೀಸರು ಬೆಂದ್ರಾಳ ಅರಣ್ಯದಲ್ಲಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಆದರೆ ಇದುವರೆಗೆ ಅಂತಹ ಘಟನೆ ನಡೆದಿರುವ ಬಗ್ಗೆ ಅಧಿಕೃತ ಸಾಕ್ಷ್ಯ ಇದುವರೆಗೆ ಲಭ್ಯವಾಗಿಲ್ಲ. ಮಾದ್ಯಮ ವರದಿಗಳ ಹಿನ್ನಲೆಯಲ್ಲಿ ಈ ಘಟನೆಗೆ ಸಂಭಂದಿಸಿ ಎಸ್ ಪಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕಿರಿಯಿಸಿರುವ ಪೊಲೀಸ್
ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ
ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ
ಹೋಗಿರುವುದು ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ಮತ್ತು ತಂಡ ತೋಟತ್ತಾಡಿ ಗ್ರಾಮದ ಬಾರೆಮನೆ ನಿವಾಸಿಗಳಾದ ರುಕ್ಕಯ ಗೌಡ ಮನೆ ಮತ್ತು ಚೆಲುವಮ್ಮ ಎಂಬುವವರ ಮನೆಯಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಬೆಂದ್ರಾಳ ಸುತ್ತಮುತ್ತಲಿನ ಸುಮಾರು 5 ಕಿ.ಮೀ ಅರಣ್ಯ ಪ್ರದೇಶದೊಳಗೆ ಹುಡುಕಾಟ ನಡೆಸಿ ನಂತರ ಸ್ಯಾಟಲೈಟ್ ಕರೆ ಹೋದ ಸ್ಥಳ ಎಂದು ಹೇಳಲಾಗಿರುವ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

