ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!

ನವದೆಹಲಿ/ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮ ಪ್ರಶಸ್ತಿ’ಗಳನ್ನು ಕೇಂದ್ರ ಸರ್ಕಾರವು ಇಂದು ಗಣರಾಜ್ಯೋತ್ಸವದ ಪೂರ್ವಸಂಧ್ಯೆ ಘೋಷಿಸಿದೆ. ಈ ಬಾರಿ ಒಟ್ಟು 131 ಗಣ್ಯರಿಗೆ ಪ್ರಶಸ್ತಿ ಲಭಿಸಿದ್ದು, ಕರ್ನಾಟಕದ ಎಂಟು ಮಂದಿ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಈ ಬಾರಿ ಕರುನಾಡಿನ ಒಬ್ಬರಿಗೆ ಪದ್ಮಭೂಷಣ ಹಾಗೂ ಏಳು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಈ ಬಾರಿಯೂ ಕೇಂದ್ರ ಸರ್ಕಾರವು ಜನಸಾಮಾನ್ಯರಲ್ಲಿ ಗುರುತಿಸಿಕೊಳ್ಳದ ‘ತೆರೆಮರೆಯ ಸಾಧಕರಿಗೆ’ ಹೆಚ್ಚಿನ ಆದ್ಯತೆ ನೀಡಿದೆ.

ಕರ್ನಾಟಕದ ಪದ್ಮಶ್ರೀ ಪ್ರಶಸ್ತಿ ವಿಜೇತರ ವಿವರ:

  • ಅಂಕೇಗೌಡ ಎಂ. (ಸಮಾಜ ಸೇವೆ)
  • ಡಾ. ಸುರೇಶ್ ಹನಗವಾಡಿ (ವೈದ್ಯಕೀಯ)
  • ಎಸ್. ಜಿ. ಸುಶೀಲಮ್ಮ (ಸಮಾಜ ಸೇವೆ)
  • ಡಾ. ಪ್ರಭಾಕರ್ ಕೋರೆ (ಶಿಕ್ಷಣ ಮತ್ತು ಸಾಹಿತ್ಯ)
  • ಶಶಿಶೇಖರ್ ವೆಂಪತಿ (ಸಾಹಿತ್ಯ ಮತ್ತು ಶಿಕ್ಷಣ)
  • ಶುಭಾ ವೆಂಕಟೇಶ್ ಅಯ್ಯಂಗಾರ್ (ವಿಜ್ಞಾನ ಮತ್ತು ಇಂಜಿನಿಯರಿಂಗ್)
  • ಟಿ.ಟಿ. ಜಗನ್ನಾಥನ್ (ಮರಣೋತ್ತರ) ವಾಣಿಜ್ಯ ಮತ್ತು ಕೈಗಾರಿಕೆ

ಪದ್ಮಭೂಷಣ ಗೌರವ:. ಕರ್ನಾಟಕದ ಖ್ಯಾತ ಬಹುಭಾಷಾ ಪಂಡಿತ ಮತ್ತು ಸಾಹಿತ್ಯ ದಿಗ್ಗಜ ಶತಾವಧಾನಿ ಆರ್. ಗಣೇಶ್ ಅವರಿಗೆ ಕಲಾ ಕ್ಷೇತ್ರದಲ್ಲಿನ ಅವರ ಅಸಾಧಾರಣ ಸಾಧನೆಗಾಗಿ ಈ ಬಾರಿಯ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಾಧಕರಿಗೆ ರಾಜ್ಯದಾದ್ಯಂತ ಗಣ್ಯರು ಮತ್ತು ಸಾರ್ವಜನಿಕರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಆರೋಗ್ಯ ಮತ್ತು ಸೌಂದರ್ಯ ತಂತ್ರಜ್ಞಾನ ಧಾರ್ಮಿಕ ರಾಜ್ಯ ಶೈಕ್ಷಣಿಕ