ಲಂಚ ಪ್ರಕರಣ: ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕಸಿದ ಕೋರ್ಟ್

ಲಂಚ ಪ್ರಕರಣ: ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕಸಿದ ಕೋರ್ಟ್

ಮಂಗಳೂರು(ಸೆ. 26): ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ತೂರು ತಾಲೂಕು ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅವರ ಜಾಮೀನು ಅರ್ಜಿಯನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ವಿಶೇಷ) ನ್ಯಾಯಾಲಯ ತಿರಸ್ಕರಿಸಿದೆ.

ಜಮೀನಿನ ನಿರಾಕ್ಷೇಪಣಾ (ಎನ್ಒಸಿ)ಪತ್ರಕ್ಕೆ ಸಂಬಂಧಿಸಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಆ.28ರಂದು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಟ್ರ್ಯಾಪ್ ವೇಳೆ ಬಂಧಿತನಾದ ಪ್ರಥಮ ದರ್ಜೆ ಸಹಾಯಕ ಸುನೀಲ್ ಕುಮಾರ್ ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರೆ, ತಲೆಮರೆಸಿಕೊಂಡಿದ್ದ ತಹಶೀಲ್ದಾರ್ ಕೂಡಲಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಈಗ ತಿರಸ್ಕರಿಸಿದೆ.

ಅಪರಾಧ ರಾಜ್ಯ