ಭಾರತೀಯ ಸೇನೆಯ ಸಾಹಸಮಯ ಕಾರ್ಯಾಚರಣೆ: ಲಡಾಖ್‌ನಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ಭಾರತೀಯ ಸೇನೆಯ ಸಾಹಸಮಯ ಕಾರ್ಯಾಚರಣೆ: ಲಡಾಖ್‌ನಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ಲಡಾಖ್‌ನ ಕಾಂಗ್‌ಮಾರು ಲಾ ಪಾಸ್‌ನಲ್ಲಿ 17,000 ಅಡಿ ಎತ್ತರದಲ್ಲಿ ಸಿಲುಕಿದ್ದ ದಕ್ಷಿಣ ಕೊರಿಯಾದ ಇಬ್ಬರು ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ. ಸೆಪ್ಟೆಂಬರ್ 4ರ ರಾತ್ರಿ ನಡೆದ ಈ ಸಾಹಸಮಯ ಕಾರ್ಯಾಚರಣೆಯಲ್ಲಿ, ಸೇನೆಯ ವಿಮಾನಯಾನ ದಳ ತುರ್ತು ಕರೆ ಸ್ವೀಕರಿಸಿ ಕೇವಲ 15 ನಿಮಿಷಗಳಲ್ಲಿ ಹೆಲಿಕಾಪ್ಟರ್ ದಳವನ್ನು ಸಜ್ಜುಗೊಳಿಸಿತು.

ರಾತ್ರಿ 8:05ಕ್ಕೆ ಕರೆ ಬಂದ ತಕ್ಷಣ, ಸೇನೆಯ ಪೈಲಟ್‌ಗಳು ನೈಟ್ ವೀಜನ‍್ ಗಾಗಲ್ಸ್‌ಗಳ ಸಹಾಯದಿಂದ ಹಿಮಗಡ್ಡೆ ಕಹಿಮಗಾಳಿ, ಶೂನ್ಯಕ್ಕೆ ಸಮಾನ ದೃಶ್ಯಮಾನತೆ ನಡುವೆ 9:15ಕ್ಕೆ ಯಶಸ್ವಿಯಾಗಿ ಇಳಿಯುವಲ್ಲಿ ಯಶಸ್ವಿಯಾದರು. ಹ್ಯುನ್ ವೂ ಕಿಮ್ ಮತ್ತು ಅವರ ಪತ್ನಿ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ವೈದ್ಯಕೀಯ ತಂಡದವರಿಗೆ ಹಸ್ತಾಂತರಿಸಲಾಯಿತು.

ಅಧಿಕಾರಿಗಳು ಈ ಮಿಷನ್‌ನ್ನು ಹೊಗಳಿದ್ದು, ಸೇನೆಯ ತರಬೇತಿ, ಹೊಂದಾಣಿಕೆ ಮತ್ತು ಎತ್ತರ ಪ್ರದೇಶದ ಕಾರ್ಯಚರಣೆ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಶ್ಲಾಘಿಸಿದರು.

ಈ ರಕ್ಷಣಾ ಕಾರ್ಯಾಚರಣೆ ಭಾರತದ ಮಾನವೀಯ ಬದ್ಧತೆಯನ್ನು ತೋರಿಸಿದ್ದು, ದೇಶೀಯರು ಮಾತ್ರವಲ್ಲದೆ ವಿದೇಶಿ ನಾಗರಿಕರಿಗೂ ಸಹಾಯ ಮಾಡುವ ನಿಲುವನ್ನು ಪ್ರತಿಬಿಂಬಿಸಿದೆ. ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಪ್ರವಾಹ ಹಾವಳಿ ಮುಂದುವರಿದಿರುವುದರಿಂದ, ಸೇನೆ ನಿರಂತರವಾಗಿ ಆಹಾರ, ವೈದ್ಯಕೀಯ ನೆರವು ಒದಗಿಸಿ, ತುರ್ತು ಪರಿಸ್ಥಿತಿಯಲ್ಲಿರುವವರನ್ನು ಸ್ಥಳಾಂತರಿಸುತ್ತಿದೆ.

ರಾಷ್ಟ್ರೀಯ