ಮಂಡ್ಯ: ಕಳೆದ ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿಯೇ ಕೆಆರ್ಎಸ್ ಡ್ಯಾಂ (ಕೃಷ್ಣರಾಜ ಸಾಗರ) ಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆ, ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಾಗಿನ ಅರ್ಪಣೆ ನೆರವೇರಿಸಲಿದ್ದಾರೆ.


ಇದೊಂದು ಅಪರೂಪದ ಸಂದರ್ಭವಾಗಿದ್ದು, ಹಿಂದೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿಯೇ ಡ್ಯಾಂ ಭರ್ತಿ ಆಗುತ್ತಿತ್ತು. ಆದರೆ ಈ ಬಾರಿ ಜೂನ್ನಲ್ಲಿಯೇ 124.80 ಅಡಿ ಗರಿಷ್ಠ ಮಟ್ಟ ತಲುಪಿರುವುದು ಗಮನಾರ್ಹವಾಗಿದೆ.
ಡ್ಯಾಂನ ಬಳಿ ಭಕ್ತಿ ಪೂಜೆ, ಹಾರಾರ್ಪಣೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದ್ದು, ಮಲೆನಾಡು ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಸಂಭವಿಸಿದ ಭಾರಿ ಮಳೆಯಿಂದಾಗಿ ಈ ಬಾರಿ ಡ್ಯಾಂ ಬೇಗನೆ ತುಂಬಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.