ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಸಂಘರ್ಷದ ಬಳಿಕ ಜಿಲ್ಲೆಯ ಎಸ್ . ಪಿ ಮತ್ತು ಕಮೀಷನರ್ ವರ್ಗಾವಣೆ ಬಳಿಕ ಇದೀಗ ತಕ್ಷಣದ ಆದೇಶದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ನೊಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಇವರ ಸ್ಥಾನಕ್ಕೆ ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಎಚ್ ವಿ ದರ್ಶನ್ ಅವರನ್ನು ನೇಮಿಸಲಾಗಿದೆ

