ಜಮ್ಮು- ಕಾಶ್ಮೀರ: ಇಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿರುವ ಶಂಕೆ ಹಿನ್ನೆಲೆ ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿದೆ. ಪ್ರಸ್ತುತ ಭಾರತೀಯ ಸೈನಿಕರು ಮೂವರು ಉಗ್ರರು ಅಡಗಿರುವ ಸ್ಥಳವನ್ನು ಸುತ್ತುವರೆದಿದ್ದು, ಓರ್ವ ಉಗ್ರನನ್ನು ಎನ್ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದೆ. ಉಳಿದ ಇಬ್ಬರು ಯೋಧರಿಗಾಗಿ ಭಾರತೀಯ ಸೇನೆ ಶೋಧ ನಡೆಸುತ್ತಿದೆ.


ಶೋಪಿಯಾನ್ ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮೀರ ಕಣಿವೆಯಲ್ಲಿ ಇರುವ ಒಂದು ಜಿಲ್ಲೆಯಾಗಿದ್ದು, ಶ್ರೀನಗರದಿಂದ 55 ಕಿಮೀ ದೂರದಲ್ಲಿದೆ. ಇದು ಪುಲ್ವಾಮಾ, ಅನಂತನಾಗ್, ಕುಲ್ಗಾಮ್, ರಾಜೌರಿ ಮತ್ತು ಪೂಂಚ್ ಜಿಲ್ಲೆಗಳ ಮಧ್ಯದಲ್ಲಿ ಇದೆ. ಇದು ಗುಡ್ಡಗಾಡುಗಳಿಂದ ಸುತ್ತುವರಿದ ಪ್ರದೇಶವಾಗಿರುವ ಕಾರಣ, ಉಗ್ರರ ಅಡಗುದಾಣವಾಗಿದೆ. ಶೋಪಿಯಾನ್ ಪೀರ್ ಪಂಜಾಲ್ ಶ್ರೇಣಿಗೆ ಹತ್ತಿರವಾಗಿರುವುದರಿಂದ ಮತ್ತು ಪಾಕಿಸ್ತಾನದ ಗಡಿ ಮಾರ್ಗಗಳಿಗೆ ಹತ್ತಿರದಲ್ಲಿ ಇರುವುದರಿಂದ, ಶೋಪಿಯಾನ್ ಪ್ರದೇಶವು ಆಗಾಗ್ಗೆ ಸೇನಾ ಕಾರ್ಯಾಚರಣೆಗಳು ನಡೆಯುವ ಪ್ರದೇಶವಾಗಿದೆ.
ಮಧ್ಯಾಹ್ನದ ವೇಳೆಗಾಗಲೇ ಉಳಿದ ಇಬ್ಬರು ಉಗ್ರರನ್ನು ಕೂಡಾ ಹತ್ಯೆ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಈ ಉಗ್ರರ ಪೈಕಿ ಒಬ್ಬ ಅದೇ ಪ್ರದೇಶದವನಾಗಿದ್ದನು. ಈ ಉಗ್ರರ ಸುಳಿವು ನೀಡಿದರೆ 20 ಲಕ್ಷ ರೂಪಾಯಿಗಳನ್ನು ಕೂಡಾ ಘೋಷಣೆ ಮಾಡಲಾಗಿತ್ತು.
ಶೋಪಿಯಾನ್ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಳಗೊಂಡಿದ್ದು, ಭದ್ರತಾ ಪಡೆಗಳು, ರಾಜಕೀಯ ಮುಖಂಡರು ಮತ್ತು ನಾಗರಿಕರನ್ನು ಗುರಿ ಮಾಡಿ ಹಲವು ದಾಳಿಗಳು ನಡೆದಿವೆ.
ಇತ್ತೀಚಿನ ಘಟನೆಗಳು:
- ಅಕ್ಟೋಬರ್ 19, 2024ರಂದು, ಶೋಪಿಯಾನ್ನ ಮಲ್ಹೂರಾದಲ್ಲಿ ಬಿಹಾರದಿಂದ ಬಂದಿರುವ ವಲಸೆ ಕಾರ್ಮಿಕನನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿದರು.
- ಮೇ 19, 2024ರಂದು, ಶೋಪಿಯಾನ್ನ ಮಾಜಿ ಅಧ್ಯಕ್ಷರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಪ್ರಮುಖ ದಾಳಿಗಳು: 2020ರಲ್ಲಿ, ಅಲ್-ಬದರ್ ಉಗ್ರರು ಟಕ್ ಮೋಹಲ್ಲಾದಲ್ಲಿನ ಬ್ಯಾಂಕ್ನಲ್ಲಿ 60 ಲಕ್ಷ ರೂ. ದೋಚಿದರು ಮತ್ತು ಬಿಜೆಪಿ ಪಂಚಾಯತ್ ಸದಸ್ಯ ನಿಸಾರ್ ಅಹ್ಮದ್ ಭಾಟ್ ಅವರನ್ನು ಅಪಹರಿಸಿ ಹತ್ಯೆಗೈದರು.
ಭದ್ರತಾ ಪಡೆಯ ಮೇಲೆ ದಾಳಿ: 2017ರಲ್ಲಿ, ಉಗ್ರರು ಸೇನಾ ವಾಹನದ ಮೇಲೆ ದಾಳಿ ಮಾಡಿ ಮೂರು ಯೋಧರು ಮತ್ತು ಒಬ್ಬ ನಾಗರಿಕರನ್ನು ಹತ್ಯೆ ಮಾಡಿದರು.