ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಮೆಜಾನ್ ಅರಣ್ಯದಲ್ಲಿ ಭೂ ಖರೀದಿ!

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಮೆಜಾನ್ ಅರಣ್ಯದಲ್ಲಿ ಭೂ ಖರೀದಿ!

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ, 2019ರಲ್ಲಿ ಭಾರತದಿಂದ ಪರಾರಿಯಾದ ನಂತರ, “ಕೈಲಾಸಾ” ಎಂಬ ತನ್ನದೇ ಆದ ರಾಷ್ಟ್ರವನ್ನು ಸ್ಥಾಪಿಸಿದ್ದಾಗಿ ಘೋಷಿಸಿದರು. ಪ್ರಾರಂಭದಲ್ಲಿ, ಅವರು ದಕ್ಷಿಣ ಅಮೆರಿಕದ ಇಕ್ವಡಾರ್ ಸಮೀಪದ ಒಂದು ದ್ವೀಪವನ್ನು ಖರೀದಿಸಿರುವುದಾಗಿ ವರದಿಯಾಯಿತು.ಆದರೆ, ಇಕ್ವಡಾರ್ ಸರ್ಕಾರವು ಈ ಆರೋಪವನ್ನು ತಳ್ಳಿ ಹಾಕಿ, ನಿತ್ಯಾನಂದನಿಗೆ ಯಾವುದೇ ರೀತಿಯ ಆಶ್ರಯ ಅಥವಾ ಭೂಮಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಇತ್ತೀಚಿನ ವರದಿಗಳ ಪ್ರಕಾರ, ನಿತ್ಯಾನಂದನ ಪ್ರತಿನಿಧಿಗಳು ಬೊಲಿವಿಯಾದ ಅಮೆಜಾನ್ ಅರಣ್ಯದಲ್ಲಿ ನೆಲೆಸಿರುವ ಸ್ಥಳೀಯ ಜನಾಂಗಗಳನ್ನು ಮೋಸಗೊಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ನಿತ್ಯಾನಂದನ ಭಕ್ತರು ಮತ್ತು ಅವರ ಆಯೋಜಿತ ಪ್ರತಿನಿಧಿಗಳು ಅರಣ್ಯದಲ್ಲಿ ಭೂ ಸ್ವಾಮ್ಯಕ್ಕೆ ಸಂಬಂಧಿಸಿದ ನಕಲಿ ಒಪ್ಪಂದಗಳಿಗೆ ಸಹಿ ಹಾಕಿಸುವ ಮೂಲಕ ಭೂಮಿ ದಬ್ಬಾಳಿಕೆ ನಡೆಸಿದ್ದಾರೆ. ಈ ಒಪ್ಪಂದಗಳು 1,000 ವರ್ಷಗಳವರೆಗೆ ಮಾನ್ಯತೆ ಹೊಂದಿರುವಂತೆ ತೊರ್ಪಡಿಸಲಾಗಿದ್ದು, ಮೂಲನಿವಾಸಿ ಸಮುದಾಯಗಳ ಸ್ವಾಯತ್ತತೆಗೆ ಸವಾಲು ಎಸೆದಿವೆ.

ಅಮೆಜಾನ್ ಅರಣ್ಯವು ಅನೇಕ ಪ್ರಾಚೀನ ಜನಾಂಗಗಳಿಗೆ ಪಾರಂಪರಿಕ ಜೀವೋತ್ಪತ್ತಿ ಕೇಂದ್ರವಾಗಿದ್ದು, ಅವರ ಬದುಕಿನ ಅವಿಭಾಜ್ಯ ಅಂಗ. ಆದರೆ, ನಿತ್ಯಾನಂದನ ಈ ನಕಲಿ ಭೂ ಒಪ್ಪಂದಗಳು ಈ ಸಮುದಾಯಗಳ ಭೂಮಿಯನ್ನು ಕಬಳಿಸುವ ಉದ್ದೇಶ ಹೊಂದಿವೆ ಎಂಬ ವಾದವು ಮುಂದುವರಿದಿದೆ.

ಈ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಪರಿಸರ ರಕ್ಷಣಾ ಗುಂಪುಗಳು ನಿತ್ಯಾನಂದ ಮತ್ತು ಅವರ ಅನುಯಾಯಿಗಳು ನಡೆಸಿದ ಭೂ ಹಗರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಪ್ರಪಂಚದ ಯಾವುದೇ ಸರ್ಕಾರ “ಕೈಲಾಸಾ” ಎಂಬ ನಿತ್ಯಾನಂದನ ನಕಲಿ ರಾಷ್ಟ್ರವನ್ನು ಮಾನ್ಯತೆ ನೀಡಿಲ್ಲ. ಆದರೆ, ಈ ನಕಲಿ ರಾಷ್ಟ್ರದ ಹೆಸರಿನಲ್ಲಿ ಅಕ್ರಮ ಭೂ ಒತ್ತುವರಿ ಮತ್ತು ಆರ್ಥಿಕ ವಂಚನೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಉಲ್ಬಣಗೊಂಡಿವೆ.

ಹಲವಾರು ದೇಶಗಳ ಸರ್ಕಾರಗಳು ನಿತ್ಯಾನಂದನ ಕೃತ್ಯಗಳ ಬಗ್ಗೆ ಹೊಸ ತನಿಖೆ ಆರಂಭಿಸಿವೆ, ಮತ್ತು ಅಂತರರಾಷ್ಟ್ರೀಯ ಭದ್ರತಾ ಸಂಸ್ಥೆಗಳು ಕೂಡ ಈ ವಂಚನೆಯ ಕೇಸ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಬೊಲಿವಿಯಾದ ಸ್ಥಳೀಯ ಆಡಳಿತವೂ ಕೂಡ ನಿತ್ಯಾನಂದನ ಭೂ ಹಗರಣದ ಬಗ್ಗೆ ತನಿಖೆ ಕೈಗೊಂಡಿದ್ದು, ಅವರ ಪ್ರತಿನಿಧಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಅಂತರಾಷ್ಟ್ರೀಯ ಅಪರಾಧ