
ಸುಳ್ಯ: ಕೃಷಿ ತೋಟಕ್ಕೆ ಮೂರು ಕಾಡಾನೆಗಳು ಲಗ್ಗೆ ಇಟ್ಟ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಾವಂಜಿಯಲ್ಲಿ ನಡೆದಿದೆ.


ಮಂಡೆಕೋಲು ಗ್ರಾಮದ ಮಾವಂಜಿ ನಾರಾಯಣ ಶಿಬರೂರು ಅವರ ತೋಟದಲ್ಲಿ ಸಂಜೆ ವೇಳೆ ಮೂರು ಕಾಡಾನೆಗಳು ಕಂಡುಬಂದಿವೆ. ಕೆಲವು ದಿನಗಳ ಹಿಂದೆ ಈ ಭಾಗದ ಕೃಷಿ ತೋಟಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆ ಅಪಾರ ಕೃಷಿ ಹಾನಿ ಮಾಡಿತ್ತು.