

ಇಂದು ನಿಧನ ಹೊಂದಿದ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ಆರ್ ಧ್ರುವನಾರಾಯಣ ರಿಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೃದ್ಧಾಂಜಲಿ ಸಭೆ ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಕೆಪಿಸಿಸಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ ನುಡಿನಮನ ಸಲ್ಲಿಸಿ
ಕಾಂಗ್ರೆಸ್ ಪಕ್ಷದ ನೈಜ ಜ್ಯಾತ್ಯಾತೀತ ತತ್ವ ಸಿದ್ದಾಂತದ ಒಂದು ಗಟ್ಟಿಯಾದ ಧ್ವನಿಯಾಗಿ ಪಕ್ಷಕ್ಕೆ ಸದಾ ಸ್ಫೂರ್ಥಿಯಾಗಿ” ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಾಲಿಗೆ ದಿವ್ಯಜ್ಯೋತಿಯಾಗಿದ್ದ ಒಬ್ಬ ದಕ್ಷ ನೇರ ನಡೆನುಡಿಯ ಪ್ರಾಮಾಣಿಕ ರಾಜಕಾರಣಿ ನಮ್ಮಿಂದ ಮರೆಯಾಗಿ ಹೋದದ್ದು ನಿಜಕ್ಕೂ ಅರಗಿಸಿಕೊಳ್ಳಲಾಗುತ್ತಿಲ್ಲ. ಎಂದು ಶೃದ್ದಾಂಜಲಿ ಸಲ್ಲಿಸಿದರು.

*ಕೆಪಿಸಿಸಿ ಸದಸ್ಯ/ಸಂಯೋಜಕ ಹೆಚ್ ಎಂ ನಂದಕುಮಾರ್ ನುಡಿನಮನ ಸಲ್ಲಿಸಿ ಕಾಂಗ್ರೆಸ್ ಪಕ್ಷವೇ ತನ್ನ ಏಕೈಕ ಉಸಿರು ಎಂದು ಪ್ರತಿಪಾದಿಸಿ ಪಕ್ಷಕ್ಕಾಗಿ “ಪಕ್ಷ ಸಂಘಟನೆಗಾಗಿ ಹಗಲಿರುಳು ತನ್ನ ಪ್ರಾಮಾಣಿಕ ನಾಯಕತ್ವದ ಮೇಲೆ ಕಾರ್ಯಾಚರಿಸಿದ ಕಾಂಗ್ರೆಸ್ ಪಕ್ಷದ ಒಬ್ಬ ಶಿಸ್ತಿನ ಸಿಪಾಯಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ ಧ್ರುವನಾರಾಯಣ್ ಸರ್ ರವರು ಇವತ್ತು ನಮ್ಮಿಂದ ದೂರವಾಗಿ ಇಹಲೋಕ ತ್ಯಜಿಸಿದರು ಎಂದು ಕೇಳಿದ ಒಂದು ದುಃಖ್ಖ ವಾರ್ತೆ ಕಾರ್ಯಕರ್ತರಿಗೆ ಅರಗಿಸಿಕೊಳ್ಳಲು ಖಂಡಿತಾ ಆಗಲ್ಲ ಆರ್ ಧ್ರುವನಾರಾಯಣ್ ರವರು ಒಬ್ಬ ಉತ್ತಮ ಸಂಸದೀಯ ಪಟುವಾಗಿ ಅತೀ ಹೆಚ್ಚು ಪ್ರಶ್ನೆ ಕೇಳಿರುವ ಉದಾಹರಣೆಇದೆ. ಅವರ ಅಕಾಲಿಕ ಮರಣ ಕಾಂಗ್ರೆಸ್ ಪಕ್ಷಕ್ಕೆ ಸದಾ ನಷ್ಟವಾಗಿದ್ದು ಅವರು ಒಬ್ಬ ವ್ಯಕ್ತಿ ಅಲ್ಲ ಅವರೊಬ್ಬ ಪಕ್ಷದ ಶಕ್ತಿಯಾಗಿದ್ದರು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ ಜಯರಾಮ್ ರವರು ನುಡಿನಮನ ಸಲ್ಲಿಸಿದರು.

ಸಭೆಯಲ್ಲಿ ಮುಖಂಡರಾದ ಮಾಜಿ ನಗರ ಪಂಚಾಯತ್ ಅಧ್ಯಕ್ಷ ಎಸ್ ಸಂಶುದ್ದಿನ್, ಶಾಫಿ ಕುತ್ತಮೊಟ್ಟೆ, ಶಶಿಧರ್ ಎಂ ಜೆ, ಭವಾನಿಶಂಕರ್ ಕಲ್ಮಡ್ಕ, ನಂದರಾಜ್ ಸಂಕೇಶ್, ಕೃಷ್ಣಸ್ವಾಮಿ ಕಂಡಡ್ಕ, ಸುರೇಶ್ ಕಾಮತ್,ಕೀರ್ತನ್ ಕೊಡಪಾಲ, ಗಂಗಾಧರ ಮೇನಾಲ ಉಪಸ್ಥಿತರಿದ್ದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ ಸ್ವಾಗತಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಕುಲ್ ದಾಸ್ ವಂದಿಸಿದರು.