ರಾಜ್ಯ

ಮನವಿಗೆ ಸ್ಫಂದನೆ ನೀಡದ ಇಲಾಖೆಗಳ ವಿರುದ್ದ ಬೇಡಿಕೆ ಈಡೇರಿಕೆಗಾಗಿ ಸುಳ್ಯ ತಾಲೋಕು ಕಚೇರಿ ಎದುರು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ.

ಹಲವು ಭಾರಿ ಇಲಾಖೆಗಳಿಗೆ ಮನವಿ ಮಾಡಿದರು ಯಾವುದೇ ಕೆಲಸ ಕಾನೂನು ಬದ್ಧವಾಗಿ ಆಗುತ್ತಿಲ್ಲ ಎಲ್ಲಾ ಕಡೆಯಲ್ಲೂ ದಲಿತರಿಗೆ ಒಂದು ಕಾನೂನು ಮೇಲ್ವರ್ಗದವರಿಗೆ ಒಂದು ಕಾನೂನು ಎನ್ನುವ ರೀತಿಯಲ್ಲಿ ಸರಕರಾರಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಮನವಿಗೆ ಸ್ಫಂದನೆ ನೀಡದ ಇಲಾಖೆಗಳು
ಡಿ.19 ರಂದು ಬೇಡಿಕೆ ಈಡೇರಿಕೆಗಾಗಿ ಸುಳ್ಯ ತಾಲೋಕು ಕಚೇರಿ ಎದುರು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

ನಡೆಸಲಾಯಿತು.ಅಂಬೆಡ್ಕರ್ ರಕ್ಷಣಾ ವೇದಿಕೆಯ ಸದಸ್ಯರು, ಬೆಳಿಗ್ಗೆಯಿಂದಲೇ ತಾಲೋಕು ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ, ಸ್ಥಳೀಯಾಡಳಿತ, ಹಾಗೂ ಕಂದಾಯ ಅಧಿಕಾರಿಗಳ ವಿರುಧ್ದ ಪ್ರತಿಭಟನೆ ಮಾಡಿದರು.ನಂತರ ಸ್ಥಳಕ್ಕೆ ಬಂದ ತಹಶೀಲ್ದಾರಿಗೆ
.ಸುಳ್ಯ ತಾಲೂಕಿನಲ್ಲಿ ಒಟ್ಟು 700 ಎಕ್ರೆ ಡಿಸಿ ಮನ್ನಾ ಜಾಗ ಇದೆ ಅದರಲ್ಲಿ 300 ಎಕ್ರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಿಕ್ಕಿರುತ್ತದೆ. ಉಳಿದ ಜಾಗವೆಲ್ಲ ಮೇಲ್ವರ್ಗದವರು ರೆಕಾರ್ಡ್ ಮಾಡಿ ಕೊಂಡಿದ್ದಾರೆ ಇದನ್ನು ಸರ್ವೇ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಬೇಕು ಸುಳ್ಯ ಕಸಬ ಗ್ರಾಮದಲ್ಲಿ ಡಿಸಿ ಮನ್ನಾ ಜಾಗ 40 ಎಕ್ರೆ ಇದೆ ಬಂಗ್ಲೆಗುಡ್ಡೆ ಡಿಸಿ ಮನ್ನಾ ಜಾಗದಲ್ಲಿ ಜೇನು ಸೊಸೈಟಿ ಬಿಲ್ಡಿಂಗ್ ಮತ್ತು ನಗರ ಪಂಚಾಯ್ತಿನವರು ವಿಶ್ರಾಂತಿ ಧಾಮ ನಿರ್ಮಿಸಿದ್ದಾರೆ ಮತ್ತು ಗಾಂಧಿನಗರದಲ್ಲಿ ಡಿಸಿ ಮನ್ನಾ ಜಾಗದಲ್ಲಿ 13 ಮೇಲ್ವರ್ಗದ ಕುಟುಂಬದವರಿಗೆ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ಕೂಡಲೆ ಆ ರೆಕಾರ್ಡ್ ಅನ್ನು ರದ್ದು ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೊಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.381/2 ಈ ಸರ್ವೇ ನಂಬರ್ ಜಾಗದಲ್ಲಿ ದಲಿತರಾದ ದಾಸಪ್ಪ ಮೇನಾಲ ಎಂಬವರು ಸುಮಾರು 40 ವರ್ಷಗಳಿಂದ ಈ ಜಾಗದಲ್ಲಿ ವಾಸವಾಗಿದ್ದಾರೆ

ಹಲವು ವರ್ಷಗಳಿಂದ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದರು ಇದುವರೆಗೂ ರೆಕಾರ್ಡ್ ಮಾಡಿ ಕೊಟ್ಟಿಲ್ಲ ಆ ಜಾಗದ ಸುತ್ತ ಎಲ್ಲರಿಗೂ ರೆಕಾರ್ಡ್ ಆಗಿರುತ್ತದೆ ಆದರೆ ಇವರಿಗೆ ಮಾತ್ರ ಮಾಡಿಕೊಟ್ಟಿಲ್ಲ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ .ಮಿತ್ತೂರು ಉಬರಡ್ಕ ಗ್ರಾಮದ ಕೊಡಿಯಾಲಬೈಲು ದಲಿತ ಕಾಲೋನಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡ ಕೋಡಿಯಾಲ ಬೈಲು ದಲಿತ ಕಾಲೋನಿ ಗೆ ಬಂದಿದ್ದನ್ನು ಸ್ಥಳ ಬದಲಾವಣೆ ಮಾಡಲಾಗಿದೆ.ಇದು ಸರಿಯಲ್ಲ ದಲಿತರಿಗೆ ಸರಕಾರದ ಯೋಜನೆ ಬಂದದ್ದು ಅವರಿಗೇ ಸಿಗಬೇಕು ಕೂಡಲೇ ಕಾಲೋನಿ ಪ್ರದೇಶದಲ್ಲಿ ದಲಿತರಿಗೆ ಶೌಚಾಲಯ ನಿರ್ಮಿಸಿ ಕೊಡಬೇಕು.


ಮಿತ್ತೂರು ಉಬರಡ್ಕ ಗ್ರಾಮದ ಅಮೈ ಪಾಲಡ್ಕ ಇಲ್ಲಿ ದೊಡ್ಡ ಸೇತುವೆ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಪಾಲಡ್ಕ ಎಂಬಲ್ಲಿಗೆ ಬಂದಂತ ಸೇತುವೆಯನ್ನು ಕಡಬಕೆ ಹಾಕಿದ್ದಾರೆ ಆದ ಕಾರಣ ಇಲ್ಲಿಗೆ ಒಂದು ಸೇತುವೆ ನಿರ್ಮಿಸಿಬೇಕು .ಅರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ 30 ವರ್ಷಗಳಿಂದ ಸೇತುವೆ ನಿರ್ಮಿಸಿ ಕೂಡಬೇಕು.ಉಬರಡ್ಕ ಗ್ರಾಮದ ಯಾವಟೆ ಕಟ್ಟಕೋಡಿ ಸಂಪರ್ಕ ರಸ್ತೆಗೆ ಕಾಂಕ್ರೀಟ್‌ಕರಣ ಮತ್ತು ಮಂಜಿಕಾನ ಬದನಕಜೆ ಸಂಪರ್ಕ ರಸ್ತೆ ಕಾಂಕ್ರೀಟ್‌ಕರಣ ಮತ್ತು ಸೇತುವೆ ನಿರ್ಮಿಸಿ ಕೊಡಬೇಕು.ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ತಾಲೂಕು ಕಚೇರಿ ಮುಂಭಾಗದಲ್ಲಿ ನಿರ್ಮಿಸಿ ಕೊಡುವುದೆಂದು ಹೇಳಿ ಇದುವರೆಗೂ ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಅರಂತೋಡು ಗ್ರಾಮದ ನೆಕ್ಕರೆಮಲೆ ಸಂಪರ್ಕ ರಸ್ತೆಗೆ ಕಾಂಕ್ರೀಟ್‌ಕರಣ ಮತ್ತು ಸೇತುವೆ ನಿರ್ಮಿಸಿ ಕೊಡಿ ಎಂದು ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.


ಈ ಹತ್ತು ಬೇಡಿಕೆ ಕೂಡಲೇ ಈಡೇರಿಸಬೇಕು ಕೆಲವು ದಿನಗಳಲ್ಲಿ ನ್ಯಾಯ ಕೊಡಿಸದಿದ್ದರೆ ಮತ್ತೆ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆ ವತಿಯಿಂದ ಪ್ರತಿಭಟನೆ ಮತ್ತು ಧರಣಿ ಮಾಡಲಿದ್ದೇವೆ ನಮ್ಮ ಈ ಎಲ್ಲ ಬೇಡಿಕೆ ಈಡೇರುವವರಿಗೆ ಧರಣಿ ಮಾಡಲಿದ್ದೇವೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸುಂದರ್ ಪಾಠಾಜೆ ಆಗ್ರಹ ಪಡಿಸಿದರು, ಮನವಿ ಸ್ವೀಕರಿಸಿ ಮಾತನಾಡಿದ ಸುಳ್ಯ ತಾಹಶೀಲ್ಧಾರ್ ಎಲ್ಲಾ ಮನವಿ ನನ್ನ ಗಮನಕ್ಕೆ ಬಂದಿದೆ ಇದರಲ್ಲಿ ಒಂದು ಕಂದಾಯ ಇಲಾಖೆಗೆ ಸಂಭಂದಿಸಿದ್ದು ಇದರ ಬಗ್ಗೆ ಕೂಡಲೆ ಕ್ರಮ ತೆಗೆದು ಕೊಳ್ಳುತೇನೆ , ಇನ್ನುಳಿದ ಮನವಿಯನ್ನು ಆಯಾ ಇಲಾಖೆಯ ಮುಖಾಂತರ ಸರಿ ಪಡಿಸಿ ಕೊಡುವ ಭರವಸೆ ನೀಡಿದರು. ನಂತರ ಅಂಬೇಡ್ಕರ್ ರಕ್ಷಣಾ ವೇದಿಕೆ ಪ್ರತಿಭಟನೆ ಹಿಂತೆಗೆದು ಕೊಂಡಿತು. ಈ ಸಂದರ್ಭದಲ್ಲಿ ಅಂಭೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ, ಪರಮೇಶ್ವರ ಕೆಮ್ಮಿಂಜೆ, ಭಾಲಕೃಷ್ಣ, ನವೀನ್ ಅರಮನೆಗಯ, ತೇಜಕುಮಾರ್, ದಾಸಪ್ಪ, ರಮೇಶ್ ಕೊಡಂಕೇರಿ, ರಾಮಕೃಷ್ಣ ಇನ್ನೂ ಹಲವಾರು ಮಂದಿಯಿದ್ದರು.

Leave a Response

error: Content is protected !!